Sunday, December 19, 2021

ಗುರುನಾಥ ಶಂಕರ ಸಾಖಲ್ಕರ್

 

ಜನನ ತಾರೀಕು: 11-01-1940

ಕುಲದೇವರು: ಶ್ರೀ ಲಕ್ಷ್ಮೀ ನರಸಿಂಹ  ಗೋತ್ರ; ಕಾಶ್ಯಪ

ಜನ್ಮ ಸ್ಥಳ: ರಾಜವಾಡಿ (ರತ್ನಗಿರಿ)

ನಿವಾಸ: ಮುದ್ದಾಂ, ಪೋಸ್ಟ್ : ಸಾರಳ್, ತಾ: ಅಲೀಬಾಗ್, ಜಿಲ್ಲಾ:ರಾಯಗಡ

     ಪ್ರಾಪ್ತ ಪರಿಸ್ಥಿತಿಯಲ್ಲಿ  ವಿದ್ಯಾದಾನ, ವಿದ್ಯಾರ್ಜನೆ,ಧನಾರ್ಜನೆ ಇದೆಲ್ಲ ಒಮ್ಮೆಲೆ ಕಸರತ್ತು ಮಾಡುವ ವ್ಯಕ್ತಿ ದುರ್ಲಭವೆಂದೇ ಹೇಳಬೇಕು.  ಗುರುನಾಥ ಶಂಕರ ಸಾಖಲ್ಕರ್ ಅದಕ್ಕೆ ಉದಾಹರಣೆ ಎಂದು ಹೇಳಬಹುದು.  ಅಲೀಬಾಗ್ ತಾಲೂಕಿನ ಹಾಶಿವರೆ ಎಂಬಲ್ಲಿ ಮಹಾತ್ಮ ಗಾಂಧಿ ಕಾಲೇಜ್ ನಲ್ಲಿ ಉತ್ಕೃಷ್ಟ  ಅಂಕಶ್ರೇಣಿಯೊಂದಿಗೆ M.Sc. ಉತ್ತೀರ್ಣರಾದರು.  ಅದೇ ವರ್ಷ ಅದೇ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆಗೆ ಸೇರಿದರು. ಒಂದೆಡೆ ಅಧ್ಯಾಪನ ಮಾಡುತ್ತಾ ಇನ್ನೊಂದೆಡೆ ಶಿಕ್ಷಣವನ್ನು ಮುಂದುವರಿಸಿದರು.  S.T.C, B.A, B.Ed ಮತ್ತು  ಹಿಂದಿ ಪಂಡಿತ್ ಪರೀಕ್ಷೆಗಳನ್ನು ಕಟ್ಟಿ ಪಾಸ್ ಮಾಡಿಕೊಂಡರು.  29 ವರ್ಷ ಪರ್ಯಂತ ಶಿಕ್ಷಕನಾಗಿದ್ದು, ಅದರಲ್ಲಿ 22 ವರ್ಷ ಸಾರಳ್(ಅಲೀಬಾಗ್ ತಾಲೂಕು) ನ ಜನತಾ ಶಿಕ್ಷಣ ಮಂಡಲದ ಮಾಧ್ಯಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. 

     ಭಾರತ-ಪಾಕ್ ಮತ್ತು ಭಾರತ-ಚೀನಾ ಯುದ್ದದ ಸಮಯದಲ್ಲಿ ವಿದ್ಯಾರ್ಥಿಗಳು ಮತ್ತು ಸಹಶಿಕ್ಷಕರ ಸಹಾಯದಿಂದ ನಿಧಿ ಸಂಗ್ರಹಿಸಿ ಸರಕಾರಕ್ಕೆ ಕಳುಹಿಸಿಕೊಟ್ಟರು. ವಿದ್ಯಾರ್ಥಿಗಳ ಬಿಡುವಿನ ವೇಳೆಯಲ್ಲಿ 1968-69 ರಲ್ಲಿ ಊರಿನ ರಸ್ತೆಯನ್ನು ಶ್ರಮದಾನದ ಮೂಲಕ ನಿರ್ಮಾಣ ಮಾಡುವುದರಲ್ಲಿ ಅವರ ಪಾತ್ರ ಅಗಾಧವಾಗಿತ್ತು.  ಗೋಪೇಶ್ವರ ಶಿಕ್ಷಣ ಮಂಡಳಿಯ ಕಾರ್ಯದರ್ಶಿಯಾಗಿ ದುಡಿದು ನಿಧಿ ಸಂಗ್ರಹಿಸಿ ಶಾಲೆಯ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು .  ಬಡ ಮಕ್ಕಳಿಗೆ ಬಿಡುವಿನ ವೇಳೆ ಉಚಿತವಾಗಿ ಹೆಚ್ಚಿನ ಶಿಕ್ಷಣ ನೀಡುತ್ತಿದ್ದರು. 1989ರಲ್ಲಿ ರಾಜ್ಯ ಸರಕಾರದ “ಆದರ್ಶ ಶಿಕ್ಷಕ” ಪ್ರಶಸ್ತಿ ಲಭಿಸಿತು.  ಕೃಷಿಯಲ್ಲೂ ಆಸಕ್ತಿ ಹೊಂದಿದ ಅವರು ಸಣ್ಣ ಜಾಗದಲ್ಲೂ ಬಹಳಷ್ಟು ತರಹದ ಕೃಷಿ ವ್ಯವಸಾಯ ಮಾಡಿದ್ದರು.  ರಾಯಗಡ ಜಿಲ್ಲಾ ಸಾರಸ್ವತ ಬ್ರಾಹ್ಮಣ ಮಂಡಲದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ.

ಇತಿ,

BSBS

Sunday, November 21, 2021

ದತ್ತಾರಾಮ ಗಣಪತಿ ತೆಂಡುಲ್ಕರ್

 

ಜನ್ಮ ತಾರೀಕು: 07-05-1932

ಜನ್ಮ ಸ್ಥಳ: ಪರಳ್ ,ಮುಂಬೈ

ಜಾತಿ ಘಟಕ : ಭಾಲಾವಲೀಕರ್  

ಕುಲದೇವರು: ಮಂಗೇಶ ಮಹಾಲಕ್ಷ್ಮಿ

ಗೋತ್ರ: ಧನಂಜಯ

ನಿವಾಸ: ಮುದ್ದಾಂ ವೈಜನಾಥ ಪೋ: ಹುಮ್ ಗಾವ್ ತಾ:ಕರ್ಜತ್

ಜಿಲ್ಲಾ; ರಾಯ್ ಗಡ್

     ಶ್ರೀ ದತ್ತ ಗಣಪತಿ  ಇವರು ಲಾಂಜಾ  ತಾಲೂಕಿನ ಹರ್ಚೆ (ಸಚಿನ್ ತೆಂಡುಲ್ಕರ್ ರ ಮೂಲ ಊರು, ಕುಟುಂಬದವರು) ಯ ಮೂಲ ನಿವಾಸಿ.  ಅನಕ್ಷರಸ್ಥೆ ತಾಯಿ ಆಚೀಚಿಗಿನ ಮನೆಗಳಲ್ಲಿ ಪಾತ್ರೆ-ಪಗಡೆ ತೊಳೆದು ಇಬ್ಬರು ಹುಡುಗರನ್ನು ಬೆಳೆಸಿದರು.  ಅಲೀಬಾಗ್ ತಾಲೂಕಿನ ಸಾಗರಗಡವೆಂಬ ಕೋಟೆಯ ಸನಿಹದಲ್ಲಿಯೇ ಇದ್ದ ಮನೆಯಲ್ಲಿ ಅವರು ಹೇಗೋ ಏನೋಮಾಡಿ ಹದಿನೈದು ವರ್ಷ ಕಳೆದರು.  ಬಾಲಕನಿದ್ದಾಗ ಬೆಳಗ್ಗೆ-ಸಾಯಂಕಾಲ ಮೂರು ಮೈಲು ನಡೆದುಕೊಂಡು ಹೋಗಿ ಪ್ರಾಥಮಿಕ ಶಿಕ್ಷಣವನ್ನು ಪೂರ್ತಿಗೊಳಿಸಿದರು. 

     1949 ಜೂನ್ ತಿಂಗಳಲ್ಲಿ ಪ್ರಾಥಮಿಕ ಶಾಲಾ ಅಧ್ಯಾಪಕನಾಗಿ ವೃತ್ತಿ ಜೀವನ ಪ್ರಾರಂಭಿಸಿದರು.  ಆ  ಸಮಯದಲ್ಲಿ ಕರ್ಜತ್ ತಾಲೂಕಿನಲ್ಲಿ ಆದಿವಾಸಿ ಜನಾಂಗ ಕಾಡು-ಮೇಡುಗಳಲ್ಲಿ ವಾಸಿಸುತ್ತಿತ್ತು.  ತೆಂಡುಲ್ಕರ್ ಇದನ್ನೇ ತನ್ನ ಕರ್ಮ ಭೂಮಿಯನ್ನಾಗಿಸಿಕೊಂಡರು.  ದಹಿವಲೀ, ಮಾಲೆಗಾಂವ್, ವಂಜಾರ್ ಪಾಡ, ಗೌಳವಾಡ, ಜಾಮರುಂಗ್, ವೈಜನಾಥ ಇತ್ಯಾದಿ ಶಾಲೆಗಳ ಸರ್ವಾಂಗ ಪರಿಪೂರ್ಣತೆಗಾಗಿ ಮನಸ್ಸು ಮಾಡಿದರು. ಶಾಲಾ ಸಮಯಕ್ಕೆ ಚ್ಯುತಿ ಬರದಂತೆ ಪ್ರತಿದಿನ ಎರಡೂವರೆ ಘಂಟೆ ಬಡಮಕ್ಕಳಿಗೆ ಉಚಿತವಾಗಿ ಕಲಿಸಲು ಪ್ರಾರಂಭಿಸಿದರು.  ಶಾಸಕೀಯ ವಿದ್ಯಾನಿಕೇತನದ ಪರೀಕ್ಷೆಗೆ 16 ಮಕ್ಕಳನ್ನು ಕುಳ್ಳಿರಿಸಿ, 8 ಮಕ್ಕಳು ನಾಶಿಕ ಮತ್ತು ಧುಳೆ ಯ ಶಾಲೆಗಳಲ್ಲಿ ಕಲಿತು ಬೇರೆ ಬೇರೆ ಉದ್ಯೋಗಗಳಲ್ಲಿ ಸೇರಿದರು.  ಅದರಲ್ಲೂ 3 ಮಕ್ಕಳು ಆದಿವಾಸಿಗಳ ಪೈಕಿ ಇದ್ದರು.  ಜಿಲ್ಲಾ ಅತ್ಯುತ್ತಮ ಶಾಲಾ ಪ್ರಶಸ್ತಿ ಯೋಜನೆಯ ಮೊದಲ ವರ್ಷದಲ್ಲೇ ದಹಿವಲಿ-ಮಾಲೆಗಾಂವ್ ಶಾಲೆಗೆ  ಬೆಳ್ಳಿ ಪದಕದ ಗೌರವ ದೊರೆಯಿತು. 1935 ರಲ್ಲಿ ಜಿಲ್ಲಾ ಪರಿಷತ್ ವತಿಯಿಂದ ಪ್ರಶಸ್ತಿ ಪತ್ರ ಮತ್ತು ಮಾನ ಚಿಹ್ನೆಯೊಂದಿಗೆ ಗೌರವಿಸಲಾಯಿತು.  ದಹಿವಲಿ-ಮಾಲೆಗಾಂವ್ ನ ನಾಗರಿಕರು ಚಿನ್ನದ ಉಂಗುರ ನೀಡಿ ಗೌರವಿಸಿದರು.  ಶ್ರೀ ದತ್ತೋವಾಮನ ಪೋತ್ ದಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ರೂ.2000/- ನೀಡಿ ಗೌರವಿಸಲಾಯಿತು.  ಈ ಸದ್ಗುಣದ ಶಿಕ್ಷಕರಿಗೆ 1973 ರಲ್ಲಿ ಸರ್ವೋಚ್ಛ ರಾಷ್ಟ್ರಪತಿ ಪಾರಿತೋಷಕ ನೀಡಿ ಗೌರವಿಸಲಾಯಿತು.

ಇತಿ,

BSBS

Saturday, November 13, 2021

ಸ್ವಾತಂತ್ರ್ಯಪೂರ್ವದ ಭಾಲಾವಲೀಕಾರ್ ಸಮಾಜದ ದಾಖಲೆಗಳು – 8 (1879)

ಈ ಹಳೆಯ ದಾಖಲೆಯಲ್ಲಿ ಭಾಲಾವಲೀಕಾರ್ ಪದ ಬಳಕೆಯಾಗಿರುವುದು ಕಾಣಬಹುದು.





ಇತಿ,

BSBS



Saturday, October 23, 2021

ಸ್ವಾತಂತ್ರ್ಯಪೂರ್ವದ ಭಾಲಾವಲೀಕಾರ್ ಸಮಾಜದ ದಾಖಲೆಗಳು – 7 (1937)

 ಸುಳ್ಯ ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ದೊರೆತಿರುವ ದಾಖಲೆ.




ಇತಿ,

BSBS




Saturday, October 9, 2021

ಸ್ವಾತಂತ್ರ್ಯಪೂರ್ವದ ಭಾಲಾವಲೀಕಾರ್ ಸಮಾಜದ ದಾಖಲೆಗಳು – 6 (1937)

 

ಸುಳ್ಯ ಸಬ್ ರಿಜಿಸ್ಟ್ರಾರ್ ಆಫೀಸಿನ ದಾಖಲೆಯಲ್ಲಿ ಭಾಲಾವಲೀಕಾರ್ ಪದವನ್ನು ಬಳಸಲಾಗುತ್ತಿತ್ತು.






ಇತಿ,

BSBS

Saturday, October 2, 2021

ಸ್ವಾತಂತ್ರ್ಯಪೂರ್ವದ ಭಾಲಾವಲೀಕಾರ್ ಸಮಾಜದ ದಾಖಲೆಗಳು – 5 (1893)

ದಕ್ಷಿಣ ಕನ್ನಡ ಅಧೀನ ನ್ಯಾಯಾಲಯದ ದಾಖಲೆಯಲ್ಲಿ ಭಾಲಾವಲೀಕಾರ್ ಎಂಬ ಪದದ ಬಳಕೆ (1893) ಸಾಮಾನ್ಯವಾಗಿತ್ತು ಎಂಬುದು ಸ್ಪಷ್ಟವಾಗಿದೆ. 


ಇತಿ,

BSBS

Saturday, September 25, 2021

ಸ್ವಾತಂತ್ರ್ಯಪೂರ್ವದ ಭಾಲಾವಲೀಕಾರ್ ಸಮಾಜದ ದಾಖಲೆಗಳು – 5 (1892)

 1892ರ ಒಂದು ರೂಪಾಯಿ ಮುಖಬೆಲೆಯ ಸ್ಟ್ಯಾಂಪ್ ಪೇಪರ್ ನಲ್ಲಿ ದೊರೆತಿರುವ ಇನ್ನೊಂದು ದಾಖಲೆ.






ಇತಿ,

BSBS



Saturday, September 18, 2021

ಸ್ವಾತಂತ್ರ್ಯಪೂರ್ವದ ಭಾಲಾವಲೀಕಾರ್ ಸಮಾಜದ ದಾಖಲೆಗಳು – 4 (1886)

 1886 ರ ನಾಲ್ಕು ರೂಪಾಯಿ ಮುಖಬೆಲೆಯ ಸ್ಟ್ಯಾಂಪ್ ಪೇಪರ್ ನಲ್ಲಿ ದೊರೆತಿರುವ ಇನ್ನೊಂದು ದಾಖಲೆ.




ಇತಿ,

BSBS

Saturday, September 11, 2021

ಸ್ವಾತಂತ್ರ್ಯಪೂರ್ವದ ಭಾಲಾವಲೀಕಾರ್ ಸಮಾಜದ ದಾಖಲೆಗಳು – 3 (1885)

 1885 ರ ರಾಣಿ ವಿಕ್ಟೋರಿಯಳ ಒಂದು ರೂಪಾಯಿ ಮುಖಬೆಲೆಯ  ಸ್ಟ್ಯಾಂಪ್ ಪೇಪರ್ ನಲ್ಲಿ ದೊರೆತಿರುವ ಇನ್ನೊಂದು ದಾಖಲೆಯನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ






ಇತಿ,

BSBS

Saturday, September 4, 2021

ಸ್ವಾತಂತ್ರ್ಯಪೂರ್ವದ ಭಾಲಾವಲೀಕರ್ ಸಮಾಜದ ದಾಖಲೆಗಳು – 2 (1884)

     1884 ರ ರಾಣಿ ವಿಕ್ಟೋರಿಯಳ ಎಂಟಾಣೆ ಮುಖಬೆಲೆಯ  ಸ್ಟ್ಯಾಂಪ್ ಪೇಪರ್ ನಲ್ಲಿ ದೊರೆತಿರುವ ದಾಖಲೆಯನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.


 


ಇತಿ,

BSBS

Saturday, August 28, 2021

ಸ್ವಾತಂತ್ರ್ಯಪೂರ್ವದ ಭಾಲಾವಲೀಕರ್ ಸಮಾಜದ ದಾಖಲೆಗಳು – 1 (1875)

     ಈ ಕೆಳಕಂಡ ದಾಖಲೆಯು 1875 ರದ್ದಾಗಿದ್ದು ಸುಮಾರು 145 ವರ್ಷಗಳಷ್ಟು  ಹಳೆಯದಾಗಿದೆ. ಬ್ರಿಟಿಷ್ ಆಡಳಿತ ಕಾಲದ  ಕಾಸರಗೋಡು ತಾಲೂಕಿನ  ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ  ದಾಖಲಾಗಿದೆ. ಆ ಸಮಯದಲ್ಲಿ ಕಾಸರಗೋಡು ದಕ್ಷಿಣ ಕನ್ನಡ ( SOUTH KANARA) ಜಿಲ್ಲೆಗೆ ಹಾಗೂ ಮಡ್ರಾಸ್ (MADRAS) ಪ್ರಾಂತ್ಯಕ್ಕೆ ಒಳಪಟ್ಟಿತ್ತು. 







ಇತಿ,

BSBS

Saturday, August 7, 2021

ರಮೇಶ ದಿಗಂಬರ ಕಾಮತ್



ಜನ್ಮ ದಿನಾಂಕ : 11-08-1923

ಜನ್ಮ ಸ್ಥಳ: ನಿವಳೀ ತಾ-  ಚಿಪಳೂಣ್

ಜಾತಿ ಘಟಕ : ಭಾಲಾವಲೀಕರ್ , ಕುಲದೇವರು: ಸಪ್ತ ಕೋಟೇಶ್ವರ

ಗೋತ್ರ :ಗೌತಮ

ನಂದಾದೀಪ, ರಾಜೇಂದ್ರ ನಗರ, ಪುಣೆ.

      ಕೆಲವರಂತೂ ಸಮಾಜ ಸೇವೆ ಮಾಡುತ್ತಾ, ಪ್ರಚಾರದಿಂದ ದೂರ ಇದ್ದು ಕೆಲಸದಲ್ಲೇ ಕಾರ್ಯ ತತ್ಪರರಾಗಿರುತ್ತಾರೆ.

ಅಂತಹ ಅತ್ಯಂತ ದುರ್ಲಭ ಸಮಾಜ ಸೇವಕನ ಪರಿಚಯ ಇಲ್ಲಿದೆ.  ರಮೇಶ ಕಾಮತ್ 1943 ಪುಣೆಗೆ ಬಂದು ನೆಲೆಸಿದರು.  ಆಗ ಅವರು P&T(ಅಂಚೆ ಮತ್ತು ತಂತಿ) ಇಲಾಖೆಯಲ್ಲಿದ್ದರು.  1981ರಲ್ಲಿ ಸೇವಾ ನಿವೃತ್ತಿ ಪಡೆದರು.  ಸೇವೆಯಲ್ಲಿದ್ದಾಗಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ (R. S. S) ದ ಕಾರ್ಯಕರ್ತರಾಗಿದ್ದರು.  ಪುಣೆ ದತ್ತವಾಡಿ ಶಾಖೆಯ ಜನಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಅನೇಕ ವರ್ಷಗಳ ವರೆಗೆ ದುಡಿದಿದ್ದಾರೆ.  ದತ್ತವಾಡಿ ವಿಕಾಸ ಮಂಡಲ, ಸಹ್ಯಾದ್ರಿ ಹೈಸ್ಕೂಲ್, ಸ್ವಾಮೀ ವಿವೇಕಾನಂದ ಮಂಡಲ, ತ್ರಿವೇಣಿ ಸಹಕಾರಿ ಗ್ರಾಹಕ ಸಂಘ ಹೀಗೆ ಪುಣೆಯ 10-12 ಸಂಸ್ಥೆಗಳ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಪುಣ್ಯವಂತ ಇವರು.

     1981ನೇ ವರ್ಷದಲ್ಲಿ ಸ್ಥಾಪನೆಯಾದ ಸಾರಸ್ವತ ಮಿತ್ರಮಂಡಲದ ಒಬ್ಬ ಅಧಾರಸ್ತಂಭವಾಗಿದ್ದರು.  ವಧೂ-ವರ ಅನ್ವೇಷಣೆಯ ವೈವಾಹಿಕ ವಿಭಾಗವನ್ನು ಪ್ರಾರಂಭಿಸಿ ಅತ್ಯಂತ ಶ್ರಧ್ಧೆ ಮತ್ತು ಪ್ರಯತ್ನದಿಂದ ಅನೇಕರ ವಿವಾಹಕ್ಕೂ ಕಾರಣರಾದ ಮಹಾನುಭಾವ.  700-800 ವಿವಾಹೇಚ್ಛ ಯುವಕ-ಯುವತಿಯರ ಮಾಹಿತಿಯನ್ನು ಸಂಗ್ರಹಿಸಿದ್ದರು.  26-01-1990 ರಂದು ಸಾರಸ್ವತ ಮಿತ್ರ ಮಂಡಲದ ವತಿಯಿಂದ ಅತಿ ದೊಡ್ಡ ಶಿಸ್ತು ಬಧ್ಧ ವಧೂವರ “ಮೇಳಾವಾ” ವನ್ನು ಸಂಘಟಿಸಿದ್ದರು.  “ಸಾರಸ್ವತ ಚೈತನ್ಯ” ಮತ್ತು ಇತರ ನಿಯತಕಾಲಿಕಗಳಲ್ಲಿ ವೈವಾಹಿಕ ವಿಚಾರದ ಬಗ್ಗೆ ವಿಚಾರ ಪ್ರವರ್ತಕ ಲೇಖನಗಳನ್ನು ಬರೆದು ಜನಜಾಗೃತಿ ಮೂಡಿಸಿದ್ದರು.

ಇತಿ,

BSBS

Sunday, August 1, 2021

ಭಾಲಾವಲಿ ಸಾರಸ್ವತ ಬ್ರಾಹ್ಮಣರ ಪ್ರಥಮ ಸಮ್ಮೇಳನ ( 1929 )

 

     ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ  ಭಾಲಾವಲೀಕರ್ ಸಾರಸ್ವತ ಬ್ರಾಹ್ಮಣರ ಪ್ರಥಮ ಸಮ್ಮೇಳನದ  ಆಮಂತ್ರಣ  ಇಲ್ಲಿದೆ (1929)  ಹಿರಿಯರಿಂದ ತಿಳಿದ ಮಾಹಿತಿಯಂತೆ ಈ ಸಮ್ಮೇಳನಕ್ಕೆ ಸಂಬಂಧಪಟ್ಟ ಹಾಸುಕಲ್ಲು ಇದ್ದು , ಅದನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ. 

ಆಮಂತ್ರಣ  


ಹಾಸುಕಲ್ಲು


ದೇವಸ್ಥಾನದ ಎಡಭಾಗ 


ಇತಿ,

BSBS

Saturday, July 10, 2021

ವಿಶ್ವಾಸ್ ಗಜಾನನ ತೆಂಡುಲ್ಕರ್

 


ಜನನ ದಿನಾಂಕ: 23-06-1946

ಜನ್ಮ ಸ್ಥಳ : ಮುಂಬೈ

ಜಾತಿಘಟಕ : ಭಾಲಾವಲೀಕರ್

ಕುಲದೇವರು: ಮಂಗೇಶ

ಗೋತ್ರ : ಧನಂಜಯ

      ಸ್ವಂತ ಕರ್ತತ್ವ ಶಕ್ತಿಯಿಂದ  ಹೊಸ ಹೊಸ ತಂತ್ರಜ್ಞಾನದಿಂದ ತನ್ನ ವ್ಯವಸಾಯವನ್ನು ಆಧುನೀಕರಿಸಿದ ವ್ಯಕ್ತಿತ್ವ ಇವರದು.  1963 ರಲ್ಲಿ ಪಿಂಟೋ ವಿಲ್ಲಾ ಶಾಲೆಯಲ್ಲಿ ಉಚ್ಛ ಶ್ರೇಣಿಯಲ್ಲಿ ಉತ್ತೀರ್ಣರಾದರು.  ಮುದ್ರಣ ತಂತ್ರಜ್ಞಾನದ 3ವರ್ಷದ ಅವಧಿಯ ಕೋರ್ಸ್ ನ್ನು ಜೆ.ಜೆ. ಸ್ಕೂಲ್ ಆಫ್ ಆರ್ಟ್ ಸಂಸ್ಥೆಯಲ್ಲಿ ಯಶಸ್ವಿಯಾಗಿ ಪೂರೈಸಿದರು.  ಬಳಿಕ ಗವರ್ನ್ಮೆಂಟ್ ಸೆಂಟ್ರಲ್ ಪ್ರೆಸ್ ನಲ್ಲಿ 1 ವರ್ಷದ ಶಿಕ್ಷಣ ಪಡೆದು ಲಂಡನ್ ಗೆ ಹೋದರು.  ಅಲ್ಲಿ ಲಂಡನ್ ಕಾಲೇಜ್ ಆಫ್ ಪ್ರಿಂಟಿಂಗ್ ಸಂಸ್ಥೆಯಲ್ಲಿ 2 ವರ್ಷದ ಪದವಿ ಶಿಕ್ಷಣ ಪಡೆದರು.  ಮಾನ್ಯವರ ಸಂಸ್ಥೆಯಲ್ಲಿ ಮುದ್ರಣದ ವಿವಿಧ ವಿಭಾಗಗಳ ಬಗ್ಗೆ 6 ತಿಂಗಳ ಅನುಭವ ಪಡೆದು ಮುಂಬೈಗೆ ಬಂದರು.  1970 ರಿಂದ 74 ರವರೆಗೆ ವಿವಿಧ ಸಂಸ್ಥೆಗಳಲ್ಲಿ ಜಾಹಿರಾತು ಕೆಲಸಗಳನ್ನು ಮಾಡಿದರು.

     ಈ ಎಲ್ಲ ಅನುಭವಗಳನ್ನು ಒಗ್ಗೂಡಿಸಿ 1974 ರಲ್ಲಿ ಲೋವರ್ ಪರೇಲ್ ನಲ್ಲಿ ಹತ್ತು ಮಂದಿ ಸಿಬ್ಬಂದಿಯೊಡನೆ “ನವ ಪ್ರಕಾಶ ಪ್ರಿಂಟಿಂಗ್ ಪ್ರೆಸ್” ಪ್ರಾರಂಭಿಸಿದರು.  ಆಗ ವರ್ಷಕ್ಕೆ 6 ಲಕ್ಷ ರೂ ಸಂಪಾದನೆಯಾಗುತ್ತಿತ್ತು.  18 ವರ್ಷಗಳಲ್ಲಿ ಅವರು ಮೂರು ಮುದ್ರಣಾಲಯಗಳ ಒಡೆಯರಾದರು.  ಒಟ್ಟು 150 ಸಿಬ್ಬಂದಿಗಳಿದ್ದು ವಾರ್ಷಿಕ 4 ಕೋಟಿಯ ವ್ಯವಹಾರ ನಡೆಯುತ್ತಿದೆ.  ವರ್ಣಮುದ್ರಣ, ಕಾರ್ಟೂನ್ ಮುದ್ರಣಕ್ಕೆ ಅವರ ಮುದ್ರಣಾಲಯ ಹೆಸರುವಾಸಿಯಾಗಿದೆ.  ನವ ಯುವಕರಿಗೆ ಪ್ರೋತ್ಸಾಹ ನೀಡಿ ಸಹಕರಿಸುವ ಉದಾರ ಗುಣ ಅವರದು.

ಇತಿ,

BSBS  


Saturday, July 3, 2021

ಶಂಕರರಾವ್ ರಘುನಾಥ ಹಳದ್ವಣೀಕರ್

ಜನ್ಮ : 18-10-1883 

ವಸಿಷ್ಠ ಗೋತ್ರ

ಭಾಲಾವಲೀಕರ್

ಕೈ. ಶಂಕರ್ ರಾವ್ ಊರ್ಫ್ ಭಾವೂ ಸಾಹೇಬ್ ರಘುನಾಥ ಹಳದ್ವಣೀಕರ್ ರವರು ಬಾಂಧಣ್ (ಅಲೀಬಾಗ್) ಎಂಬ ಊರಿನಲ್ಲಿ ಬಡ ಕುಟುಂಬದಲ್ಲಿ ಜನಿಸಿದರು.  ಹಲದವಣೀ ಗೋವಾ ದ ಒಂದು ಹಳ್ಳಿ.  ಭಾವೂ ಸಾಹೇಬರ ಪ್ರಾಥಮಿಕ ವಿದ್ಯಾಭ್ಯಾಸ ಪೇಣ್ ಎಂಬಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸ ಬಡೋದ್ಯಾದಲ್ಲಿ, ಇಂಟರ್ ಆರ್ಟ್ಸ್ ವರೆಗಿನ ಶಿಕ್ಷಣ ಮುಂಬೈ ವಿಲ್ಸನ್ ಕಾಲೇಜಿನಲ್ಲಿ ನಡೆಯಿತು.  1905 ರಲ್ಲಿ ಮುಂಬೈಯ G.P.O.ನಲ್ಲಿ ಉದ್ಯೋಗ ಪ್ರಾರಂಭಿಸಿದರು.  ಅವರು ಬಹಳಷ್ಟು ಕಾಲ ಪಾಕಿಸ್ತಾನದಲ್ಲಿ ವಾಸ್ತವ್ಯವಿದ್ದರು.  1932ರಲ್ಲಿ ಸಿಂಧು ಪ್ರಾಂತ್ಯದಲ್ಲಿ ಮಹಾರಾಷ್ಟ್ರ ಮಂಡಲದ ಮುಂಚೂಣಿ ನಾಯಕರಾಗಿದ್ದರು.  1937 ರಲ್ಲಿ “ಆಫ್ರಿನಾಮಾ” ಮತ್ತು 6th ಎಡ್ವರ್ಡ್ ‘ಕೊರೋನೆಶನ್’ ಪದವಿ ಲಭಿಸಿತ್ತು.  ಹೆಡ್ ಪೋಸ್ಟ್ ಮಾಸ್ತರ್ ಪದವಿವರೆಗೂ ಭಡ್ತಿಯಾಗಿ  1938 ರಲ್ಲಿ ಕಾಳಬಾದೇವಿ ಪೋಸ್ಟ್ ಆಫೀಸ್ ನಲ್ಲಿ ನಿವೃತ್ತಿಯಾದರು.

     ಸೇವಾ ನಿವೃತ್ತಿಯ ಬಳಿಕ ತಮ್ಮ ಅಲೀಬಾಗ್ ನ ತಾಡ್ ವಾಗಳೆ ಊರಿನಲ್ಲಿ ಕೃಷಿ ವ್ಯವಸಾಯಕ್ಕಿಳಿದರು.     ತಮ್ಮ ಮಾತೋಶ್ರೀಯವರ ಸ್ಮರಣಾರ್ಥ ಅಲೀಬಾಗ್ ನ ಹೆಣ್ಣು ಮಕ್ಕಳ ಶಾಲೆಗೆ  13-06-1945 ರಂದು ಕೈ.ಅಣ್ಣಾ ಸಾಹೇಬ್ ಕರ್ವೇಯವರಲ್ಲಿ ರೂ.10,000 ದೇಣಿಗೆಯನಿತ್ತರು.   1949ರಲ್ಲಿ ನಡೆದ ‘ ಸಾರಸ್ವತ ಹಿತವರ್ಧಕ ಮಂಡಲ ‘ ದ ರಜತ ಮಹೋತ್ಸವದ ಅಧ್ಯಕ್ಷರಾಗಿ ಆಯ್ಕೆಯಾದರು.  ಸಾರಸ್ವತ ವಿದ್ಯಾರ್ಥಿ ಸಹಾಯಕ ಮಂಡಳಿ ಮತ್ತು ಸಾರಸ್ವತ ದೀನ ವತ್ಸಲಸಂಘಗಳ ವಿಶ್ವಸ್ಥ (ಟ್ರಸ್ಟಿ) ಯಾಗಿಯೂ ಕಾರ್ಯ ನಿರ್ವಸಿರುತ್ತಾರೆ.   ಪೊಯ್ನಾಡ್ ಮತ್ತು ಪಂಚ ಕ್ರೋಶಿ ಪರಿಸರದಲ್ಲಿಯೂ ಅನೇಕ ಕಾರ್ಯಗಳನ್ನು ಮಾಡಿದರು.  ಅಲ್ಲಿ ಎರಡು ಮಹಡಿ ಕಟ್ಟಡವೊಂದನ್ನು  ತಾನೇ ಕಟ್ಟಿಸಿ,ಹೈ ಸ್ಕೂಲ್  ಪ್ರಾರಂಭಿಸಿ ತನ್ನ ಕನಸನ್ನು ನನಸುಗೊಳಿಸಿದರು.  ತನ್ನ ಪ್ರಥಮ ಪತ್ನಿ ಕೈ. ಸರಸ್ವತೀಬಾಯಿ ಯವರ ಸ್ಮರಣಾರ್ಥ 1957 ರಲ್ಲಿ ‘ ಸಾರಸ್ವತ ಹಿತವರ್ಧಕ’ ಮಂಡಲಕ್ಕೆ ರೂ. 10000 ದೇಣಿಗೆಯಿತ್ತರು.  ನಿರ್ವ್ಯಸನಿ, ಆತ್ಮೀಯ ಮಿತ್ರ ಸ್ವಭಾವ, ಕಾರ್ಯ ತತ್ಪರತೆ ಮುಂತಾದ ಗುಣರತ್ನಗಳಿಂದ ಕೀರ್ತಿವಂತರಾಗಿದ್ದರು.

ಇತಿ,

BSBS 


Saturday, June 19, 2021

ಡಾ| ಮುರಳೀಧರ ರಾಮಚಂದ್ರ ಕಾಮತ್

 


ಜನನ: 06-05-1934

ಜನ್ಮ ಸ್ಥಳ: ಚರೀ ( ಅಲೀಬಾಗ್)

ಕುಲದೇವರು: ದೇವಕೀರವಳನಾಥ

ಜಾತಿಘಟಕ: ಭಾಲಾವಲೀಕರ್

ಗೋತ್ರ : ವಸಿಷ್ಠ

ನಿವಾಸ: 549, ವಿಲ್ಸಾ ಜಸವಂತ್, 13ನೇ ರಸ್ತೆ, T.P.S-3, ಖಾರ್, ಮುಂಬೈ- 400052  

     ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ G.U and G.V.N.ಸೇವೆಯಲ್ಲಿ ಮುಖ್ಯ ಸರ್ಜನ್ ಆಗಿ ಗುರುತಿಸಿಕೊಂಡವರು ಡಾ| ಮುರಳೀಧರ ಕಾಮತ್.  1957ರಲ್ಲಿ M.B.B.S ಪದವಿ ಪಡೆದರು.  ಆರು ವರ್ಷಗಳ ಅಧ್ಯಯನ ಮಾಡಿ ಸರ್ಜರಿಯಲ್ಲಿ M.Sc.ಉನ್ನತ ಶಿಕ್ಷಣ ಪಡೆದರು.  1965ರಲ್ಲಿ F.C.P.S. ಮತ್ತು 1977 ರಲ್ಲಿ F.I.C.S  ಆದರು.  1958ರಿಂದ 1973 ರ ನಡುವೆ ವಾಡಿಯಾ, K.E.M, ಟಾಟಾ ಮತ್ತು U.S ನಲ್ಲಿ ಶಸ್ತ್ರ ಚಿಕಿತ್ಸೆಯ ಬಗ್ಗೆ ವಿಶೇಷ ಶಿಕ್ಷಣ ಪಡೆದರು. 

     ಅವರಿಗೆ ವೈದ್ಯಕೀಯ ಶಿಕ್ಷಣದ ಸಮಯದಲ್ಲಿ ಮನೋರಮಾ ಹಜರತ್ ಪಾರಿತೋಷಕ (1954), ಡಾ.ಶಿವಲ್ ಕರ್ ಬೆಳ್ಳಿಪದಕ (1955), N.A ಪುರಂದರ ಪಾರಿತೋಷಕಗಳು ಲಭಿಸಿದವು.  1970ರಲ್ಲಿ U.S.ನಲ್ಲಿ ನ್ಯೂಯಾರ್ಕ್ ಎಂಡ್ ಬಫೆಲೊ ನಲ್ಲಿ ಮಂಡಿಸಿದ ಪ್ರಬಂಧಕ್ಕೆ ಎರಡು ಪಾರಿತೋಷಕಗಳು ಲಭಿಸಿದವು.  ಶರೀರದಲ್ಲಿ ಮೂತ್ರಪಿಂಡ ಕಶಿ ಮಾಡಿದ ಪ್ರಪ್ರಥಮ ಭಾರತೀಯ ಡಾಕ್ಟರ್ ಇವರು.  1971ರಿಂದ 1987 ರ ಕಾಲಾವಧಿಯಲ್ಲಿ ಭಾರತದ ಪ್ರಮುಖ ನಗರಗಳಲ್ಲಿ ವೈದ್ಯಕೀಯ ಸೆಮಿನಾರ್ ಗಳಲ್ಲಿ “ಕ್ಯಾನ್ಸರ್” ವಿಚಾರದಲ್ಲಿ 32 ಪ್ರಬಂಧಗಳನ್ನು ಮಂಡಿಸಿದ್ದಾರೆ.  ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಟ್ರಸ್ಟಿ ಮತ್ತು ಜತೆ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿರುತ್ತಾರೆ. ಇವರು ಮಹಾರಾಷ್ಟ್ರ ಸರಕಾರದ ರಾಜ್ಯಪಾಲರ ಗೌರವ ಕ್ಯಾನ್ಸರ್ ಸ್ಪೆಷಲಿಸ್ಟ್ ಆಗಿಯೂ ಸೇವೆಸಲ್ಲಿಸಿದ್ದಾರೆ. Bombay University (ಮುಂಬೈ ವಿಶ್ವವಿದ್ಯಾಲಯ) ಯ M.S ಪರೀಕ್ಷೆಗೆ ಸ್ನಾತಕೋತ್ತರ ಅಧ್ಯಾಪಕರಾಗಿದ್ದು, ಮದ್ರಾಸ್ ವಿಶ್ವವಿದ್ಯಾಲಯ ದ M.Ch. ಅಂಕಾಲಜಿ ಯ ಪರೀಕ್ಷಕರೂ ಆಗಿದ್ದರು,

ಇತಿ,

BSBS

Saturday, June 12, 2021

ಡಾ. ಪ. ಗ. ದಾದಾ ಸಾಹೇಬ್ ತೆಂಡುಲ್ಕರ್



ಜನ್ಮ; 9-9-1913

ಸ್ಥಳ: ಭಡೇ

ಮರಣ ; 13-9-1985

ಗೋತ್ರ : ಧನಂಜಯ

ಜಾತಿ ಘಟಕ: ಭಾಲಾವಲೀಕರ್

     ಡಾ| ದಾದಾ ಸಾಹೇಬ್ ತೆಂಡುಲ್ಕರ್  ಇವರು ರತ್ನಗಿರಿ ತಾಲೂಕಿನ ಭಡೇ ಎಂಬ ಊರಿನಲ್ಲಿ ಜನಿಸಿದರು.  1919 ಇಸವಿಯಲ್ಲಿ ತನ್ನ 6 ವರ್ಷ ವಯಸ್ಸಿನಲ್ಲಿ ತಮ್ಮ ತಂದೆ-ತಾಯಿಯವರೊಡನೆ “ಪುಣ್ಯ” ಎಂಬ ಊರಿನಲ್ಲಿ ವಾಸ್ತವ್ಯವಿದ್ದುದರಿಂದ ಅವರ ಶಿಕ್ಷಣ ಅಲ್ಲೇ ನಡೆಯಿತು.  ಸಾರ್ವಜನಿಕ ಸೇವೆಯಲ್ಲಿ ತನ್ನ ತಂದೆಯವರೊಡನೆ ಅವರಿಗೂ ಅವಕಾಶ ದೊರೆಯಿತು. ತಂದೆಯ ಬಳಿಕ ದಾದಾ ಸಾಹೇಬ್ ವೈದ್ಯಕೀಯ ಸೇವೆಯಲ್ಲಿ ತೊಡಗಿದರು.  ಸರಿಯಾದ ಸೂಕ್ತ ಚಿಕಿತ್ಸೆ, ಉತ್ತಮ ಔಷದೋಪಚಾರಕ್ಕೆ ಅವರು ಹೆಸರುವಾಸಿಯಾಗಿದ್ದರು.  ಹಣದಾಸೆಯಿಲ್ಲದೆ, ಬಡವರಿಗೆ ಉಚಿತವಾಗಿಯೂ ಸೇವೆ ನೀಡುತಿದ್ದರು.  ಕುಟುಂಬ ಮತ್ತು ಸಮಾಜವೆರಡರಲ್ಲೂ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದರು.

     1956 ರ ಮೊದಲು LONG LIFE INSURANCE COMPANY ಇತ್ತು.  ಅದರ ಸಂಚಾಲಕರಾಗಿ, ಅಧ್ಯಕ್ಷರಾಗಿಯೂ ಕೆಲಸ ಮಾಡಿದರು.  ತಳೇಗಾಂನ ಪೈಸಾ ಫಂಡ್ ಕಾಚ್ ಕಾರಖಾನೆಯ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ.  17 ವರ್ಷ ಈ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು.  ಆ ಸಮಯದಲ್ಲಿ ಕಾರಖಾನೆಯ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು.  ಅತ್ಯಂತ ಕಠಿಣ ಪರಿಶ್ರಮದಿಂದ ದಾದಾ ಸಾಹೇಬರು ಲಾಭ ಬರುವತ್ತ ತಂದು ನಿಲ್ಲಿಸಿದರು.  “ಪುಣೆ ಪೀಪಲ್ಸ್ ಸಹಕಾರಿ ಬ್ಯಾಂಕ್” ನ 32 ವರ್ಷ ಸ್ಥಾಪಕರೂ ಅಧ್ಯಕ್ಷರೂ ಆಗಿದ್ದರು.  1952 ರ ವರೆಗೂ “ಪುಣ್ಯ” ದ ಸಾರಸ್ವತರ ಸಮಸ್ಯೆಗಳ ಪರಿಹಾರ, ಸಮಾಜೋನ್ನತಿಗಾಗಿ ಶ್ರಮಿಸಿರುತ್ತಾರೆ.  1981ರಲ್ಲಿ ನವಯುವಕರು ಸೇರಿ “ಸಾರಸ್ವತ ಮಿತ್ರ ಮಂಡಲ” ಹೆಸರಿನ ವೇದಿಕೆಯನ್ನು ಹುಟ್ಟುಹಾಕಿದರು.  ದಾದಾ ಸಾಹೇಬ್ ಮಂಡಲದ ಕೇವಲ ಅಧ್ಯಕ್ಷರಷ್ಟೇ ಆಗಿರಲಿಲ್ಲ.  ಪಿತೃ ದೇವರಂತೆ (GOD FATHER) ತನ್ನೆಲ್ಲ ಶಕ್ತಿಯನ್ನು ಪ್ರಯೋಗಿಸಿ ಸರ್ವಾಂಗೀಣವಾಗಿರುವಂತೆ ಮಾಡಿದರು.


ಇತಿ,

BSBS