Saturday, July 10, 2021

ವಿಶ್ವಾಸ್ ಗಜಾನನ ತೆಂಡುಲ್ಕರ್

 


ಜನನ ದಿನಾಂಕ: 23-06-1946

ಜನ್ಮ ಸ್ಥಳ : ಮುಂಬೈ

ಜಾತಿಘಟಕ : ಭಾಲಾವಲೀಕರ್

ಕುಲದೇವರು: ಮಂಗೇಶ

ಗೋತ್ರ : ಧನಂಜಯ

      ಸ್ವಂತ ಕರ್ತತ್ವ ಶಕ್ತಿಯಿಂದ  ಹೊಸ ಹೊಸ ತಂತ್ರಜ್ಞಾನದಿಂದ ತನ್ನ ವ್ಯವಸಾಯವನ್ನು ಆಧುನೀಕರಿಸಿದ ವ್ಯಕ್ತಿತ್ವ ಇವರದು.  1963 ರಲ್ಲಿ ಪಿಂಟೋ ವಿಲ್ಲಾ ಶಾಲೆಯಲ್ಲಿ ಉಚ್ಛ ಶ್ರೇಣಿಯಲ್ಲಿ ಉತ್ತೀರ್ಣರಾದರು.  ಮುದ್ರಣ ತಂತ್ರಜ್ಞಾನದ 3ವರ್ಷದ ಅವಧಿಯ ಕೋರ್ಸ್ ನ್ನು ಜೆ.ಜೆ. ಸ್ಕೂಲ್ ಆಫ್ ಆರ್ಟ್ ಸಂಸ್ಥೆಯಲ್ಲಿ ಯಶಸ್ವಿಯಾಗಿ ಪೂರೈಸಿದರು.  ಬಳಿಕ ಗವರ್ನ್ಮೆಂಟ್ ಸೆಂಟ್ರಲ್ ಪ್ರೆಸ್ ನಲ್ಲಿ 1 ವರ್ಷದ ಶಿಕ್ಷಣ ಪಡೆದು ಲಂಡನ್ ಗೆ ಹೋದರು.  ಅಲ್ಲಿ ಲಂಡನ್ ಕಾಲೇಜ್ ಆಫ್ ಪ್ರಿಂಟಿಂಗ್ ಸಂಸ್ಥೆಯಲ್ಲಿ 2 ವರ್ಷದ ಪದವಿ ಶಿಕ್ಷಣ ಪಡೆದರು.  ಮಾನ್ಯವರ ಸಂಸ್ಥೆಯಲ್ಲಿ ಮುದ್ರಣದ ವಿವಿಧ ವಿಭಾಗಗಳ ಬಗ್ಗೆ 6 ತಿಂಗಳ ಅನುಭವ ಪಡೆದು ಮುಂಬೈಗೆ ಬಂದರು.  1970 ರಿಂದ 74 ರವರೆಗೆ ವಿವಿಧ ಸಂಸ್ಥೆಗಳಲ್ಲಿ ಜಾಹಿರಾತು ಕೆಲಸಗಳನ್ನು ಮಾಡಿದರು.

     ಈ ಎಲ್ಲ ಅನುಭವಗಳನ್ನು ಒಗ್ಗೂಡಿಸಿ 1974 ರಲ್ಲಿ ಲೋವರ್ ಪರೇಲ್ ನಲ್ಲಿ ಹತ್ತು ಮಂದಿ ಸಿಬ್ಬಂದಿಯೊಡನೆ “ನವ ಪ್ರಕಾಶ ಪ್ರಿಂಟಿಂಗ್ ಪ್ರೆಸ್” ಪ್ರಾರಂಭಿಸಿದರು.  ಆಗ ವರ್ಷಕ್ಕೆ 6 ಲಕ್ಷ ರೂ ಸಂಪಾದನೆಯಾಗುತ್ತಿತ್ತು.  18 ವರ್ಷಗಳಲ್ಲಿ ಅವರು ಮೂರು ಮುದ್ರಣಾಲಯಗಳ ಒಡೆಯರಾದರು.  ಒಟ್ಟು 150 ಸಿಬ್ಬಂದಿಗಳಿದ್ದು ವಾರ್ಷಿಕ 4 ಕೋಟಿಯ ವ್ಯವಹಾರ ನಡೆಯುತ್ತಿದೆ.  ವರ್ಣಮುದ್ರಣ, ಕಾರ್ಟೂನ್ ಮುದ್ರಣಕ್ಕೆ ಅವರ ಮುದ್ರಣಾಲಯ ಹೆಸರುವಾಸಿಯಾಗಿದೆ.  ನವ ಯುವಕರಿಗೆ ಪ್ರೋತ್ಸಾಹ ನೀಡಿ ಸಹಕರಿಸುವ ಉದಾರ ಗುಣ ಅವರದು.

ಇತಿ,

BSBS  


No comments:

Post a Comment