Saturday, June 19, 2021

ಡಾ| ಮುರಳೀಧರ ರಾಮಚಂದ್ರ ಕಾಮತ್

 


ಜನನ: 06-05-1934

ಜನ್ಮ ಸ್ಥಳ: ಚರೀ ( ಅಲೀಬಾಗ್)

ಕುಲದೇವರು: ದೇವಕೀರವಳನಾಥ

ಜಾತಿಘಟಕ: ಭಾಲಾವಲೀಕರ್

ಗೋತ್ರ : ವಸಿಷ್ಠ

ನಿವಾಸ: 549, ವಿಲ್ಸಾ ಜಸವಂತ್, 13ನೇ ರಸ್ತೆ, T.P.S-3, ಖಾರ್, ಮುಂಬೈ- 400052  

     ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ G.U and G.V.N.ಸೇವೆಯಲ್ಲಿ ಮುಖ್ಯ ಸರ್ಜನ್ ಆಗಿ ಗುರುತಿಸಿಕೊಂಡವರು ಡಾ| ಮುರಳೀಧರ ಕಾಮತ್.  1957ರಲ್ಲಿ M.B.B.S ಪದವಿ ಪಡೆದರು.  ಆರು ವರ್ಷಗಳ ಅಧ್ಯಯನ ಮಾಡಿ ಸರ್ಜರಿಯಲ್ಲಿ M.Sc.ಉನ್ನತ ಶಿಕ್ಷಣ ಪಡೆದರು.  1965ರಲ್ಲಿ F.C.P.S. ಮತ್ತು 1977 ರಲ್ಲಿ F.I.C.S  ಆದರು.  1958ರಿಂದ 1973 ರ ನಡುವೆ ವಾಡಿಯಾ, K.E.M, ಟಾಟಾ ಮತ್ತು U.S ನಲ್ಲಿ ಶಸ್ತ್ರ ಚಿಕಿತ್ಸೆಯ ಬಗ್ಗೆ ವಿಶೇಷ ಶಿಕ್ಷಣ ಪಡೆದರು. 

     ಅವರಿಗೆ ವೈದ್ಯಕೀಯ ಶಿಕ್ಷಣದ ಸಮಯದಲ್ಲಿ ಮನೋರಮಾ ಹಜರತ್ ಪಾರಿತೋಷಕ (1954), ಡಾ.ಶಿವಲ್ ಕರ್ ಬೆಳ್ಳಿಪದಕ (1955), N.A ಪುರಂದರ ಪಾರಿತೋಷಕಗಳು ಲಭಿಸಿದವು.  1970ರಲ್ಲಿ U.S.ನಲ್ಲಿ ನ್ಯೂಯಾರ್ಕ್ ಎಂಡ್ ಬಫೆಲೊ ನಲ್ಲಿ ಮಂಡಿಸಿದ ಪ್ರಬಂಧಕ್ಕೆ ಎರಡು ಪಾರಿತೋಷಕಗಳು ಲಭಿಸಿದವು.  ಶರೀರದಲ್ಲಿ ಮೂತ್ರಪಿಂಡ ಕಶಿ ಮಾಡಿದ ಪ್ರಪ್ರಥಮ ಭಾರತೀಯ ಡಾಕ್ಟರ್ ಇವರು.  1971ರಿಂದ 1987 ರ ಕಾಲಾವಧಿಯಲ್ಲಿ ಭಾರತದ ಪ್ರಮುಖ ನಗರಗಳಲ್ಲಿ ವೈದ್ಯಕೀಯ ಸೆಮಿನಾರ್ ಗಳಲ್ಲಿ “ಕ್ಯಾನ್ಸರ್” ವಿಚಾರದಲ್ಲಿ 32 ಪ್ರಬಂಧಗಳನ್ನು ಮಂಡಿಸಿದ್ದಾರೆ.  ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಟ್ರಸ್ಟಿ ಮತ್ತು ಜತೆ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿರುತ್ತಾರೆ. ಇವರು ಮಹಾರಾಷ್ಟ್ರ ಸರಕಾರದ ರಾಜ್ಯಪಾಲರ ಗೌರವ ಕ್ಯಾನ್ಸರ್ ಸ್ಪೆಷಲಿಸ್ಟ್ ಆಗಿಯೂ ಸೇವೆಸಲ್ಲಿಸಿದ್ದಾರೆ. Bombay University (ಮುಂಬೈ ವಿಶ್ವವಿದ್ಯಾಲಯ) ಯ M.S ಪರೀಕ್ಷೆಗೆ ಸ್ನಾತಕೋತ್ತರ ಅಧ್ಯಾಪಕರಾಗಿದ್ದು, ಮದ್ರಾಸ್ ವಿಶ್ವವಿದ್ಯಾಲಯ ದ M.Ch. ಅಂಕಾಲಜಿ ಯ ಪರೀಕ್ಷಕರೂ ಆಗಿದ್ದರು,

ಇತಿ,

BSBS

No comments:

Post a Comment