ಜನ್ಮ ತಾರೀಕು: 07-05-1932
ಜನ್ಮ ಸ್ಥಳ: ಪರಳ್ ,ಮುಂಬೈ
ಜಾತಿ ಘಟಕ :
ಭಾಲಾವಲೀಕರ್
ಕುಲದೇವರು: ಮಂಗೇಶ ಮಹಾಲಕ್ಷ್ಮಿ
ಗೋತ್ರ: ಧನಂಜಯ
ನಿವಾಸ: ಮುದ್ದಾಂ ವೈಜನಾಥ
ಪೋ: ಹುಮ್ ಗಾವ್ ತಾ:ಕರ್ಜತ್
ಜಿಲ್ಲಾ; ರಾಯ್ ಗಡ್
ಶ್ರೀ
ದತ್ತ ಗಣಪತಿ ಇವರು ಲಾಂಜಾ ತಾಲೂಕಿನ ಹರ್ಚೆ (ಸಚಿನ್ ತೆಂಡುಲ್ಕರ್ ರ ಮೂಲ ಊರು,
ಕುಟುಂಬದವರು) ಯ ಮೂಲ ನಿವಾಸಿ. ಅನಕ್ಷರಸ್ಥೆ
ತಾಯಿ ಆಚೀಚಿಗಿನ ಮನೆಗಳಲ್ಲಿ ಪಾತ್ರೆ-ಪಗಡೆ ತೊಳೆದು ಇಬ್ಬರು ಹುಡುಗರನ್ನು ಬೆಳೆಸಿದರು. ಅಲೀಬಾಗ್ ತಾಲೂಕಿನ ಸಾಗರಗಡವೆಂಬ ಕೋಟೆಯ ಸನಿಹದಲ್ಲಿಯೇ ಇದ್ದ
ಮನೆಯಲ್ಲಿ ಅವರು ಹೇಗೋ ಏನೋಮಾಡಿ ಹದಿನೈದು ವರ್ಷ ಕಳೆದರು.
ಬಾಲಕನಿದ್ದಾಗ ಬೆಳಗ್ಗೆ-ಸಾಯಂಕಾಲ ಮೂರು ಮೈಲು ನಡೆದುಕೊಂಡು ಹೋಗಿ ಪ್ರಾಥಮಿಕ ಶಿಕ್ಷಣವನ್ನು
ಪೂರ್ತಿಗೊಳಿಸಿದರು.
1949 ಜೂನ್ ತಿಂಗಳಲ್ಲಿ ಪ್ರಾಥಮಿಕ ಶಾಲಾ ಅಧ್ಯಾಪಕನಾಗಿ
ವೃತ್ತಿ ಜೀವನ ಪ್ರಾರಂಭಿಸಿದರು. ಆ ಸಮಯದಲ್ಲಿ ಕರ್ಜತ್ ತಾಲೂಕಿನಲ್ಲಿ ಆದಿವಾಸಿ ಜನಾಂಗ
ಕಾಡು-ಮೇಡುಗಳಲ್ಲಿ ವಾಸಿಸುತ್ತಿತ್ತು.
ತೆಂಡುಲ್ಕರ್ ಇದನ್ನೇ ತನ್ನ ಕರ್ಮ ಭೂಮಿಯನ್ನಾಗಿಸಿಕೊಂಡರು. ದಹಿವಲೀ, ಮಾಲೆಗಾಂವ್, ವಂಜಾರ್ ಪಾಡ, ಗೌಳವಾಡ,
ಜಾಮರುಂಗ್, ವೈಜನಾಥ ಇತ್ಯಾದಿ ಶಾಲೆಗಳ ಸರ್ವಾಂಗ ಪರಿಪೂರ್ಣತೆಗಾಗಿ ಮನಸ್ಸು ಮಾಡಿದರು. ಶಾಲಾ
ಸಮಯಕ್ಕೆ ಚ್ಯುತಿ ಬರದಂತೆ ಪ್ರತಿದಿನ ಎರಡೂವರೆ ಘಂಟೆ ಬಡಮಕ್ಕಳಿಗೆ ಉಚಿತವಾಗಿ ಕಲಿಸಲು ಪ್ರಾರಂಭಿಸಿದರು. ಶಾಸಕೀಯ ವಿದ್ಯಾನಿಕೇತನದ ಪರೀಕ್ಷೆಗೆ 16 ಮಕ್ಕಳನ್ನು
ಕುಳ್ಳಿರಿಸಿ, 8 ಮಕ್ಕಳು ನಾಶಿಕ ಮತ್ತು ಧುಳೆ ಯ ಶಾಲೆಗಳಲ್ಲಿ ಕಲಿತು ಬೇರೆ ಬೇರೆ ಉದ್ಯೋಗಗಳಲ್ಲಿ
ಸೇರಿದರು. ಅದರಲ್ಲೂ 3 ಮಕ್ಕಳು ಆದಿವಾಸಿಗಳ ಪೈಕಿ
ಇದ್ದರು. ಜಿಲ್ಲಾ ಅತ್ಯುತ್ತಮ ಶಾಲಾ ಪ್ರಶಸ್ತಿ ಯೋಜನೆಯ
ಮೊದಲ ವರ್ಷದಲ್ಲೇ ದಹಿವಲಿ-ಮಾಲೆಗಾಂವ್ ಶಾಲೆಗೆ ಬೆಳ್ಳಿ ಪದಕದ ಗೌರವ ದೊರೆಯಿತು. 1935 ರಲ್ಲಿ ಜಿಲ್ಲಾ ಪರಿಷತ್
ವತಿಯಿಂದ ಪ್ರಶಸ್ತಿ ಪತ್ರ ಮತ್ತು ಮಾನ ಚಿಹ್ನೆಯೊಂದಿಗೆ ಗೌರವಿಸಲಾಯಿತು. ದಹಿವಲಿ-ಮಾಲೆಗಾಂವ್ ನ ನಾಗರಿಕರು ಚಿನ್ನದ ಉಂಗುರ ನೀಡಿ
ಗೌರವಿಸಿದರು. ಶ್ರೀ ದತ್ತೋವಾಮನ ಪೋತ್ ದಾರ್ ರವರ
ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ರೂ.2000/- ನೀಡಿ ಗೌರವಿಸಲಾಯಿತು. ಈ ಸದ್ಗುಣದ ಶಿಕ್ಷಕರಿಗೆ 1973 ರಲ್ಲಿ ಸರ್ವೋಚ್ಛ
ರಾಷ್ಟ್ರಪತಿ ಪಾರಿತೋಷಕ ನೀಡಿ ಗೌರವಿಸಲಾಯಿತು.
ಇತಿ,
BSBS
No comments:
Post a Comment