Saturday, June 19, 2021

ಡಾ| ಮುರಳೀಧರ ರಾಮಚಂದ್ರ ಕಾಮತ್

 


ಜನನ: 06-05-1934

ಜನ್ಮ ಸ್ಥಳ: ಚರೀ ( ಅಲೀಬಾಗ್)

ಕುಲದೇವರು: ದೇವಕೀರವಳನಾಥ

ಜಾತಿಘಟಕ: ಭಾಲಾವಲೀಕರ್

ಗೋತ್ರ : ವಸಿಷ್ಠ

ನಿವಾಸ: 549, ವಿಲ್ಸಾ ಜಸವಂತ್, 13ನೇ ರಸ್ತೆ, T.P.S-3, ಖಾರ್, ಮುಂಬೈ- 400052  

     ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ G.U and G.V.N.ಸೇವೆಯಲ್ಲಿ ಮುಖ್ಯ ಸರ್ಜನ್ ಆಗಿ ಗುರುತಿಸಿಕೊಂಡವರು ಡಾ| ಮುರಳೀಧರ ಕಾಮತ್.  1957ರಲ್ಲಿ M.B.B.S ಪದವಿ ಪಡೆದರು.  ಆರು ವರ್ಷಗಳ ಅಧ್ಯಯನ ಮಾಡಿ ಸರ್ಜರಿಯಲ್ಲಿ M.Sc.ಉನ್ನತ ಶಿಕ್ಷಣ ಪಡೆದರು.  1965ರಲ್ಲಿ F.C.P.S. ಮತ್ತು 1977 ರಲ್ಲಿ F.I.C.S  ಆದರು.  1958ರಿಂದ 1973 ರ ನಡುವೆ ವಾಡಿಯಾ, K.E.M, ಟಾಟಾ ಮತ್ತು U.S ನಲ್ಲಿ ಶಸ್ತ್ರ ಚಿಕಿತ್ಸೆಯ ಬಗ್ಗೆ ವಿಶೇಷ ಶಿಕ್ಷಣ ಪಡೆದರು. 

     ಅವರಿಗೆ ವೈದ್ಯಕೀಯ ಶಿಕ್ಷಣದ ಸಮಯದಲ್ಲಿ ಮನೋರಮಾ ಹಜರತ್ ಪಾರಿತೋಷಕ (1954), ಡಾ.ಶಿವಲ್ ಕರ್ ಬೆಳ್ಳಿಪದಕ (1955), N.A ಪುರಂದರ ಪಾರಿತೋಷಕಗಳು ಲಭಿಸಿದವು.  1970ರಲ್ಲಿ U.S.ನಲ್ಲಿ ನ್ಯೂಯಾರ್ಕ್ ಎಂಡ್ ಬಫೆಲೊ ನಲ್ಲಿ ಮಂಡಿಸಿದ ಪ್ರಬಂಧಕ್ಕೆ ಎರಡು ಪಾರಿತೋಷಕಗಳು ಲಭಿಸಿದವು.  ಶರೀರದಲ್ಲಿ ಮೂತ್ರಪಿಂಡ ಕಶಿ ಮಾಡಿದ ಪ್ರಪ್ರಥಮ ಭಾರತೀಯ ಡಾಕ್ಟರ್ ಇವರು.  1971ರಿಂದ 1987 ರ ಕಾಲಾವಧಿಯಲ್ಲಿ ಭಾರತದ ಪ್ರಮುಖ ನಗರಗಳಲ್ಲಿ ವೈದ್ಯಕೀಯ ಸೆಮಿನಾರ್ ಗಳಲ್ಲಿ “ಕ್ಯಾನ್ಸರ್” ವಿಚಾರದಲ್ಲಿ 32 ಪ್ರಬಂಧಗಳನ್ನು ಮಂಡಿಸಿದ್ದಾರೆ.  ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಟ್ರಸ್ಟಿ ಮತ್ತು ಜತೆ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿರುತ್ತಾರೆ. ಇವರು ಮಹಾರಾಷ್ಟ್ರ ಸರಕಾರದ ರಾಜ್ಯಪಾಲರ ಗೌರವ ಕ್ಯಾನ್ಸರ್ ಸ್ಪೆಷಲಿಸ್ಟ್ ಆಗಿಯೂ ಸೇವೆಸಲ್ಲಿಸಿದ್ದಾರೆ. Bombay University (ಮುಂಬೈ ವಿಶ್ವವಿದ್ಯಾಲಯ) ಯ M.S ಪರೀಕ್ಷೆಗೆ ಸ್ನಾತಕೋತ್ತರ ಅಧ್ಯಾಪಕರಾಗಿದ್ದು, ಮದ್ರಾಸ್ ವಿಶ್ವವಿದ್ಯಾಲಯ ದ M.Ch. ಅಂಕಾಲಜಿ ಯ ಪರೀಕ್ಷಕರೂ ಆಗಿದ್ದರು,

ಇತಿ,

BSBS

Saturday, June 12, 2021

ಡಾ. ಪ. ಗ. ದಾದಾ ಸಾಹೇಬ್ ತೆಂಡುಲ್ಕರ್



ಜನ್ಮ; 9-9-1913

ಸ್ಥಳ: ಭಡೇ

ಮರಣ ; 13-9-1985

ಗೋತ್ರ : ಧನಂಜಯ

ಜಾತಿ ಘಟಕ: ಭಾಲಾವಲೀಕರ್

     ಡಾ| ದಾದಾ ಸಾಹೇಬ್ ತೆಂಡುಲ್ಕರ್  ಇವರು ರತ್ನಗಿರಿ ತಾಲೂಕಿನ ಭಡೇ ಎಂಬ ಊರಿನಲ್ಲಿ ಜನಿಸಿದರು.  1919 ಇಸವಿಯಲ್ಲಿ ತನ್ನ 6 ವರ್ಷ ವಯಸ್ಸಿನಲ್ಲಿ ತಮ್ಮ ತಂದೆ-ತಾಯಿಯವರೊಡನೆ “ಪುಣ್ಯ” ಎಂಬ ಊರಿನಲ್ಲಿ ವಾಸ್ತವ್ಯವಿದ್ದುದರಿಂದ ಅವರ ಶಿಕ್ಷಣ ಅಲ್ಲೇ ನಡೆಯಿತು.  ಸಾರ್ವಜನಿಕ ಸೇವೆಯಲ್ಲಿ ತನ್ನ ತಂದೆಯವರೊಡನೆ ಅವರಿಗೂ ಅವಕಾಶ ದೊರೆಯಿತು. ತಂದೆಯ ಬಳಿಕ ದಾದಾ ಸಾಹೇಬ್ ವೈದ್ಯಕೀಯ ಸೇವೆಯಲ್ಲಿ ತೊಡಗಿದರು.  ಸರಿಯಾದ ಸೂಕ್ತ ಚಿಕಿತ್ಸೆ, ಉತ್ತಮ ಔಷದೋಪಚಾರಕ್ಕೆ ಅವರು ಹೆಸರುವಾಸಿಯಾಗಿದ್ದರು.  ಹಣದಾಸೆಯಿಲ್ಲದೆ, ಬಡವರಿಗೆ ಉಚಿತವಾಗಿಯೂ ಸೇವೆ ನೀಡುತಿದ್ದರು.  ಕುಟುಂಬ ಮತ್ತು ಸಮಾಜವೆರಡರಲ್ಲೂ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದರು.

     1956 ರ ಮೊದಲು LONG LIFE INSURANCE COMPANY ಇತ್ತು.  ಅದರ ಸಂಚಾಲಕರಾಗಿ, ಅಧ್ಯಕ್ಷರಾಗಿಯೂ ಕೆಲಸ ಮಾಡಿದರು.  ತಳೇಗಾಂನ ಪೈಸಾ ಫಂಡ್ ಕಾಚ್ ಕಾರಖಾನೆಯ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ.  17 ವರ್ಷ ಈ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು.  ಆ ಸಮಯದಲ್ಲಿ ಕಾರಖಾನೆಯ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು.  ಅತ್ಯಂತ ಕಠಿಣ ಪರಿಶ್ರಮದಿಂದ ದಾದಾ ಸಾಹೇಬರು ಲಾಭ ಬರುವತ್ತ ತಂದು ನಿಲ್ಲಿಸಿದರು.  “ಪುಣೆ ಪೀಪಲ್ಸ್ ಸಹಕಾರಿ ಬ್ಯಾಂಕ್” ನ 32 ವರ್ಷ ಸ್ಥಾಪಕರೂ ಅಧ್ಯಕ್ಷರೂ ಆಗಿದ್ದರು.  1952 ರ ವರೆಗೂ “ಪುಣ್ಯ” ದ ಸಾರಸ್ವತರ ಸಮಸ್ಯೆಗಳ ಪರಿಹಾರ, ಸಮಾಜೋನ್ನತಿಗಾಗಿ ಶ್ರಮಿಸಿರುತ್ತಾರೆ.  1981ರಲ್ಲಿ ನವಯುವಕರು ಸೇರಿ “ಸಾರಸ್ವತ ಮಿತ್ರ ಮಂಡಲ” ಹೆಸರಿನ ವೇದಿಕೆಯನ್ನು ಹುಟ್ಟುಹಾಕಿದರು.  ದಾದಾ ಸಾಹೇಬ್ ಮಂಡಲದ ಕೇವಲ ಅಧ್ಯಕ್ಷರಷ್ಟೇ ಆಗಿರಲಿಲ್ಲ.  ಪಿತೃ ದೇವರಂತೆ (GOD FATHER) ತನ್ನೆಲ್ಲ ಶಕ್ತಿಯನ್ನು ಪ್ರಯೋಗಿಸಿ ಸರ್ವಾಂಗೀಣವಾಗಿರುವಂತೆ ಮಾಡಿದರು.


ಇತಿ,

BSBS

Saturday, June 5, 2021

ಪ್ರೊಫೆಸರ್ ರಮೇಶ ಅಚ್ಯುತ ತೆಂಡುಲ್ಕರ್

 


ಜನನ ದಿನಾಂಕ: 18-12-1930        

ಜಾತಿಘಟಕ: ಭಾಲಾವಲೀಕರ್

ಕುಲದೇವರು: ಮಂಗೇಶ-ಮಹಾಲಕ್ಷ್ಮಿ

ಗೋತ್ರ: ಧನಂಜಯ

ನಿವಾಸ: 7, ಉಷ;ಕಾಲ, ಸಾಹಿತ್ಯ ಸಹವಾಸ್ ಬಾಂದ್ರೆ(ಪೂ) ಮುಂಬೈ ೪೦೦೫೧

    ಕಾವ್ಯ ಮತ್ತು ಸಮೀಕ್ಷೆ  ಲೇಖನದಲ್ಲಿ ಪ್ರೊ. ರಮೇಶ ತೆಂಡುಲ್ಕರ್ ಹೆಸರು ಅಗ್ರಮಾನ್ಯವಾಗಿದೆ.  ಅವರು ಅಲೀಬಾಗ್ ತಾಲೂಕಿನ ವೇಶವೀ ಊರಿನಲ್ಲಿ ಬಾಲ್ಯವನ್ನು ಕಳೆದರು.  ಅಲೀಬಾಗ್ ನ ಕೊಂಕಣ ಎಜುಕೇಶನ್ ಸೊಸೈಟಿಯ ಇಂಡಸ್ಟ್ರಿಯಲ್ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ ಪಡೆದರು.  1947ರಲ್ಲಿ ಮೆಟ್ರಿಕ್ ಪರೀಕ್ಷೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದರು.  ಮುಂಬೈಯ ಸಿದ್ಧಾರ್ಥ ಕಾಲೇಜ್ ನಲ್ಲಿ ಬಿ.ಎ. ಪದವಿ ಪಡೆದರು.  ಬಿ.ಎ.ಯಲ್ಲಿ ತರ್ಖಡ್ ಕರ್ ಸುವರ್ಣ ಪದಕ ಮತ್ತು ಫೆಲೋಶಿಪ್ ಪಡೆದರು.  ಎಂ.ಎ. ಯಲ್ಲಿ ನ.ಚಿ.ಕೇಳ್ಕರ್ ಸುವರ್ಣ ಪದಕ ಪಡೆದರು.  ಓದುವುದು ಬರೆಯುವುದು ಅವರು  ಬಾಲ್ಯದಿಂದಲೇ ಕರಗತ ಮಾಡಿಕೊಂಡ ಅಭ್ಯಾಸ.  ಅದರ ಉಪಯೋಗ ಅವರಿಗೆ ಮಹಾವಿದ್ಯಾಲಯ ಮಟ್ಟದಲ್ಲಿ ಪ್ರಯೋಜನವಾಯಿತು.  ಕುಮಾರ ಸಾಹಿತ್ಯ ಚಳುವಳಿಯಲ್ಲಿ ಅವರು ಭಾಗವಹಿಸಿದ್ದರು.  ರಹಾಳ್ ಕರ್ ಮತ್ತು ಆವಳಸ್ಕರ್ ಎಂಬ ಸಂಶೋಧಕರ ಪ್ರೋತ್ಸಾಹ ಅವರ ಬರವಣಿಗೆಗೆ ವರದಾನವಾಯಿತು. 

     ೧೮ನೇ ವರ್ಷ ವಯಸ್ಸಿನಲ್ಲಿ ಪೋಲಿಸ್ ಆಯುಕ್ತರ ಕಚೇರಿಯಲ್ಲಿ M.O. B. ವಿಭಾಗದಲ್ಲಿ ಉದ್ಯೋಗಕ್ಕೆ ಸೇರಿದರು. ವಾಂಙ್ಮಯ ಪ್ರಾಜ್ಞ ಪರಿಷದ್ ನ ತರಗತಿಗಳು ಅಲ್ಲೇ ನಡೆಯುತ್ತಿದ್ದವು.  ಮರ್ಡೆಕರ್ , ದಾ.ರಾ.ಕುಲಕರ್ಣಿ ಮುಂತಾದವರ ಪರಿಚಯ ಅಲ್ಲಿ ಅವರಿಗಾಯಿತು.  ಅಧ್ಯಯನದೊಂದಿಗೆ ಅಧ್ಯಾಪನದಲ್ಲಿಯೂ ಅವರಿಗೆ ಮಾರ್ಗದರ್ಶನ ಲಭಿಸಿತು.  ಅಲ್ಲೇ ತೆಂಡುಲ್ಕರ್ ರಿಗೆ ಭಾಷಣ ಮಾಡುವ ಸುಯೋಗ ಲಭಿಸಿತು.  ಅಲ್ಲಿ ಶ್ರೀ ಮಾಧವ ಮನೋಹರ ಹಿಂದಿನಿಂದ ಬಂದು  ತೆಂಡುಲ್ಕರರ ಭಾಷಣ ಕೇಳಲಾರಂಭಿಸಿದರು. ಅವರಿಗೆ ತುಂಬಾ ಸಂತೋಷವಾಯಿತು.  ಶ್ರೀ ಅನಂತ ಕಾಣೆಕರ್ ರಿಗೂ ಕೇಳಿ ಖುಷಿಯಾಯಿತು.  ಅವರು ತೆಂಡುಲ್ಕರ್ ರನ್ನು ಸಿದ್ಧಾರ್ಥ ಕಾಲೇಜಿಗೆ ಲೆಕ್ಚರರ್ ಆಗಿ ನೇಮಕ ಮಾಡಲು ಶಿಫಾರಸು ಮಾಡಿದರು.

     ಸಿದ್ಧಾರ್ಥ ಕಾಲೇಜ್ ನಲ್ಲಿ (1955-67) 12 ವರ್ಷ ಅವರು ಸೇವೆ ಸಲ್ಲಿಸಿದ್ದಾರೆ.  1967ರಲ್ಲಿ ಕೀರ್ತಿ ಕಾಲೇಜ್ ನಲ್ಲಿ H.O.D. ಆಗಿ ನೇಮಕಗೊಂಡರು.  ಮರಾಠಿಯಲ್ಲಿ ಉತ್ತಮ ಶಿಕ್ಷಕನೂ, ವಿದ್ಯಾರ್ಥಿ ಪ್ರಿಯನೂ ಆಗಿದ್ದರು.  ಹತ್ತು ಉದಯೋನ್ಮುಖ ಕವಿಗಳ ಕವಿತಾ ದಶಕವನ್ನು ಗ್ರಂಥಾಲೀ ಪ್ರಕಾಶನದ ಮುಖಾಂತರ ಸಂಪಾದಿಸಿ ಪ್ರಕಟಿಸಿದರು.  1960 ರ ವರೆಗಿನ ಅರ್ವಾಚೀನ ಕವಿಗಳ ಕವಿತೆಗಳನ್ನು ಸಂಪಾದಿಸಿ ಪ್ರಕಟಿಸಿದರು.  ಅವರ ಕವಿತೆಗಳು ಇತರ ಭಾಷೆಗಳಿಗೂ ತರ್ಜುಮೆಗೊಂಡಿವೆ.  ಅನೇಕ ಕವಿತೆಗಳು  ಪಠ್ಯ ಪುಸ್ತಕದೊಳಕ್ಕೂ ಸೇರಿಕೊಂಡಿವೆ.

     ಅವರ ಕವಿತಾವಾಚನ ಕಾರ್ಯಕ್ರಮ ದೂರದರ್ಶನ ಮತ್ತು ಆಕಾಶವಾಣಿಯಲ್ಲೂ ಬಿತ್ತರಗೊಂಡಿದೆ.  ಭಾ. ರಾ. ತಾಂಬೆ, ಪು.ಶಿ.ರೇಗೆ, ಅನಂತ ಕಾಣೆಕರ್, ಬಾ.ಭ.ಬೋರ್ಕರ್, ಗ. ದಿ.ಮಡಗೂಳ್ ಕರ್ ಇವರ ಕಾವ್ಯ ಸಮೀಕ್ಷೆಯಿದ್ದ ಪ್ರಥಮ ಸ್ವತಂತ್ರ ಗ್ರಂಥಕ್ಕೆ ಮಹಾರಾಷ್ಟ್ರ ಸರಕಾರದ ಪಾರಿತೋಷಕ ಲಭಿಸಿದೆ. 

     ಅನಂತ ಕಾಣೆಕರ್ ರ “ ಚೌಕೊನೀ ಆಕಾಶ್ “, ಇಂದಿರಾ ಸಂತರ “ಮೃಣ್ಮಯೀ “ ಕವಿತೆಗಳಿದ್ದ ಪುಸ್ತಕದ ಸಂಪಾದಕತ್ವವೂ ತೆಂಡುಲ್ಕರರದ್ದಾಗಿತ್ತು.  ಅದಕ್ಕೆ ಗಂಗಾಧರ ಗಾಡ್ಗೀಳ್ ರ ಮುನ್ನುಡಿಯೂ ಮುಕುಟವಿಟ್ಟಿತ್ತು.  ಕಾವ್ಯ ಮತ್ತು ಸಮೀಕ್ಷೆಯ ಬಗೆಗಿನ ಲೇಖನಗಳೇ ಅವರ ಹೆಚ್ಚಿನ ಬರವಣಿಗೆಯಾಗಿತ್ತು.  ಹಳೆಯ ಕವಿತೆಗಳನ್ನು ಸಂಶೋಧಿಸಿ, ಸಂಪಾದಿಸಿ ಪ್ರಕಟಿಸಿರುತ್ತಾರೆ.  “ಆ‍‍‌‍ಠ್ ವಣೀ ತಲ್ಯಾ ಕವಿತಾ” ಸಂಗ್ರಹವೆನ್ನುವ ಈ ಪುಸ್ತಕ ಪ್ರಕಾಶನದ ಅಂಗಡಿಗೆ ಬರುವುದಕ್ಕೆ ಮೊದಲೇ ಕೈಯಿಂದ ಕೈಗೆ ಮೂರು ಸಾವಿರ ಪ್ರತಿಗಳೂ ಮಾರಟವಾದವಂತೆ.

  ವಿ.ಸೂ : ರಮೇಶ ಟೆಂಡುಲ್ಕರ್, ಕ್ರಿಕೆಟ್ ತಾರೆ ಸಚಿನ್ ತೆಂಡುಲ್ಕರ್ ರ ತಂದೆ.  ಇವರ ಪೂರ್ವಜರು ಭಾಲಾವಲಿಯಿಂದ ನಾಲ್ಕೈದು ಕಿ.ಮೀ. ದೂರದ ಹರ್ಚೆ ತೆಂಡುಲ್ಕರ್ ವಾಡಿಯಿಂದ ಮುಂಬೈಗೆ ವಲಸೆ ಹೋದವರು.

ಇತಿ,

BSBS