ಜನನ ದಿನಾಂಕ : 26-02-1932
ಜಾತಿ ಘಟಕ: ಭಾಲಾವಲೀಕರ್
ಕುಲದೇವರು: ಮಂಗೇಶ ಮಹಾಲಕ್ಷ್ಮಿ
ಗೋತ್ರ; ಧನಂಜಯ
ಮುದ್ದಾಂ,ಪೋಸ್ಟ್, ತಾಲೂಕು: ಜಹ್ಹಾರ್, ಜಿಲ್ಲಾ: ಠಾಣೆ
ರಾಮಚಂದ್ರ (ಬಬನ್ ರಾವ್) ಇವರು ನರ್ಸಿಂಗ್ ಕೋರ್ಸ್ ಮಾಡಿ ಉದ್ಯೋಗಕ್ಕೆ ಸೇರಿದರು. ತಮ್ಮ ಭಾಗದಲ್ಲಿ ಗಿರಣಿ (ಮಿಲ್) ಯನ್ನು ಪ್ರಾರಂಭಿಸಿದರು. ಜೊತೆಯಲ್ಲೇ ಜಹ್ವಾರ್ ನಗರಪಾಲಿಕೆಯ ಕೆಲಸಕ್ಕೂ ಮುಂದಾದರು.
ಸುಮಾರು 25 ವರ್ಷ ನಗರ ಪಾಲಿಕೆಯ ಸದಸ್ಯರಾಗಿದ್ದು 15-16ವರ್ಷಗಳಷ್ಟು ಕಾಲ ಅಧ್ಯಕ್ಷರಾಗಿದ್ದರು. ಅಧ್ಯಕ್ಷರಾಗಿದ್ದ ಕಾಲದಲ್ಲಿ ಜಹ್ವಾರ ನಗರದ ಸಾಮಾಜಿಕ,
ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ
ಪಡಿಸಿದರು. ಲೋಕಪ್ರಿಯ ನಾಯಕರಾದ ಅವರು ಸೂರ್ಯನಗರ-ಗೋಂಡಾ
ಘಾಟ್ ರಸ್ತೆಯ ಕಾಮಗಾರಿಯನ್ನು ಮಾಡಿ ಇಂಜಿನಿಯರ್ ಗಳಿಂದ ಪ್ರಶಸ್ತಿಯನ್ನು ಪಡೆದರು. ನಗರದಲ್ಲಿ ಕಾಲೇಜು ಸ್ಥಾಪನೆಯಲ್ಲಿ ಅವರದ್ದು ಪ್ರಮುಖ
ಪಾತ್ರವಿತ್ತು. ಸೌಜನ್ಯ ಶೀಲ ಸ್ವಭಾವದಿಂದ ಅವರು
ಜನರನ್ನು ಒಗ್ಗೂಡಿಸುತ್ತಿದ್ದರು. ನಿ:ಸಂಶಯವಾಗಿ
ಅವರ ವ್ಯಕ್ತಿತ್ವವು ಇಂದಿನ ಯುವಕರಿಗೆ ಸ್ಫೂರ್ತಿ ನೀಡುವಂತಹುದಾಗಿದೆ.
ಇತಿ,
BSBS
No comments:
Post a Comment