Saturday, May 29, 2021

ರಾಮಚಂದ್ರ ವಿಷ್ಣು ತೆಂಡುಲ್ಕರ್

 



ಜನನ ದಿನಾಂಕ : 26-02-1932

ಜಾತಿ ಘಟಕ: ಭಾಲಾವಲೀಕರ್

ಕುಲದೇವರು: ಮಂಗೇಶ ಮಹಾಲಕ್ಷ್ಮಿ

ಗೋತ್ರ; ಧನಂಜಯ

ಮುದ್ದಾಂ,ಪೋಸ್ಟ್, ತಾಲೂಕು: ಜಹ್ಹಾರ್, ಜಿಲ್ಲಾ:  ಠಾಣೆ

     ರಾಮಚಂದ್ರ (ಬಬನ್ ರಾವ್) ಇವರು ನರ್ಸಿಂಗ್ ಕೋರ್ಸ್ ಮಾಡಿ ಉದ್ಯೋಗಕ್ಕೆ ಸೇರಿದರು.  ತಮ್ಮ ಭಾಗದಲ್ಲಿ ಗಿರಣಿ (ಮಿಲ್) ಯನ್ನು ಪ್ರಾರಂಭಿಸಿದರು.  ಜೊತೆಯಲ್ಲೇ ಜಹ್ವಾರ್ ನಗರಪಾಲಿಕೆಯ ಕೆಲಸಕ್ಕೂ ಮುಂದಾದರು. ಸುಮಾರು 25 ವರ್ಷ ನಗರ ಪಾಲಿಕೆಯ ಸದಸ್ಯರಾಗಿದ್ದು 15-16ವರ್ಷಗಳಷ್ಟು ಕಾಲ ಅಧ್ಯಕ್ಷರಾಗಿದ್ದರು.  ಅಧ್ಯಕ್ಷರಾಗಿದ್ದ ಕಾಲದಲ್ಲಿ ಜಹ್ವಾರ ನಗರದ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಡಿಸಿದರು.  ಲೋಕಪ್ರಿಯ ನಾಯಕರಾದ ಅವರು ಸೂರ್ಯನಗರ-ಗೋಂಡಾ ಘಾಟ್ ರಸ್ತೆಯ ಕಾಮಗಾರಿಯನ್ನು ಮಾಡಿ ಇಂಜಿನಿಯರ್ ಗಳಿಂದ ಪ್ರಶಸ್ತಿಯನ್ನು ಪಡೆದರು.  ನಗರದಲ್ಲಿ ಕಾಲೇಜು ಸ್ಥಾಪನೆಯಲ್ಲಿ ಅವರದ್ದು ಪ್ರಮುಖ ಪಾತ್ರವಿತ್ತು.  ಸೌಜನ್ಯ ಶೀಲ ಸ್ವಭಾವದಿಂದ ಅವರು ಜನರನ್ನು ಒಗ್ಗೂಡಿಸುತ್ತಿದ್ದರು.  ನಿ:ಸಂಶಯವಾಗಿ ಅವರ ವ್ಯಕ್ತಿತ್ವವು ಇಂದಿನ ಯುವಕರಿಗೆ ಸ್ಫೂರ್ತಿ ನೀಡುವಂತಹುದಾಗಿದೆ.

ಇತಿ,

BSBS


Sunday, May 23, 2021

1984ರ ಬಿ ಯಸ್ ಬಿ (ರಿ) ಮಹಾಸಭೆಯ ಸೂಚನಾ ಪತ್ರ

 

ದಿನಾಂಕ 25-3-1984 ರ ಐದನೇ ವಾರ್ಷಿಕ ಮಹಾಸಭೆಯ ಸೂಚನಾ ಪತ್ರ

ಬಿ ಯಸ್ ಬಿ (ರಿ)





ಇತಿ,

BSBS