1929 ನೇ ಇಸವಿಯಲ್ಲಿ ಅಖಿಲ ಭಾರತ ಭಾಲಾವಲಿಕಾರ್ ಸಾರಸ್ವತ ಬ್ರಾಹ್ಮಣರ ಅಧ್ಯಾಪಕ ಸಂಘ ಮೋಂತಿಮಾರು ಇದರ ಲೆಕ್ಕ ಪತ್ರದ ನೋಟಿಸನ್ನು ಕೆಳಗೆ ಲಗತ್ತಿಸಲಾಗಿದೆ
ಇತಿ,
BSBS
1929 ನೇ ಇಸವಿಯಲ್ಲಿ ಅಖಿಲ ಭಾರತ ಭಾಲಾವಲಿಕಾರ್ ಸಾರಸ್ವತ ಬ್ರಾಹ್ಮಣರ ಅಧ್ಯಾಪಕ ಸಂಘ ಮೋಂತಿಮಾರು ಇದರ ಲೆಕ್ಕ ಪತ್ರದ ನೋಟಿಸನ್ನು ಕೆಳಗೆ ಲಗತ್ತಿಸಲಾಗಿದೆ
ಇತಿ,
BSBS
ಜನನ ತಾರೀಕು: 11-01-1940
ಕುಲದೇವರು: ಶ್ರೀ ಲಕ್ಷ್ಮೀ
ನರಸಿಂಹ ಗೋತ್ರ; ಕಾಶ್ಯಪ
ಜನ್ಮ ಸ್ಥಳ: ರಾಜವಾಡಿ (ರತ್ನಗಿರಿ)
ನಿವಾಸ: ಮುದ್ದಾಂ, ಪೋಸ್ಟ್
: ಸಾರಳ್, ತಾ: ಅಲೀಬಾಗ್, ಜಿಲ್ಲಾ:ರಾಯಗಡ
ಪ್ರಾಪ್ತ ಪರಿಸ್ಥಿತಿಯಲ್ಲಿ ವಿದ್ಯಾದಾನ, ವಿದ್ಯಾರ್ಜನೆ,ಧನಾರ್ಜನೆ ಇದೆಲ್ಲ
ಒಮ್ಮೆಲೆ ಕಸರತ್ತು ಮಾಡುವ ವ್ಯಕ್ತಿ ದುರ್ಲಭವೆಂದೇ ಹೇಳಬೇಕು. ಗುರುನಾಥ ಶಂಕರ ಸಾಖಲ್ಕರ್ ಅದಕ್ಕೆ ಉದಾಹರಣೆ ಎಂದು ಹೇಳಬಹುದು. ಅಲೀಬಾಗ್ ತಾಲೂಕಿನ ಹಾಶಿವರೆ ಎಂಬಲ್ಲಿ ಮಹಾತ್ಮ ಗಾಂಧಿ ಕಾಲೇಜ್
ನಲ್ಲಿ ಉತ್ಕೃಷ್ಟ ಅಂಕಶ್ರೇಣಿಯೊಂದಿಗೆ M.Sc. ಉತ್ತೀರ್ಣರಾದರು. ಅದೇ ವರ್ಷ ಅದೇ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆಗೆ ಸೇರಿದರು.
ಒಂದೆಡೆ ಅಧ್ಯಾಪನ ಮಾಡುತ್ತಾ ಇನ್ನೊಂದೆಡೆ ಶಿಕ್ಷಣವನ್ನು ಮುಂದುವರಿಸಿದರು. S.T.C,
B.A, B.Ed ಮತ್ತು ಹಿಂದಿ ಪಂಡಿತ್ ಪರೀಕ್ಷೆಗಳನ್ನು ಕಟ್ಟಿ ಪಾಸ್ ಮಾಡಿಕೊಂಡರು. 29 ವರ್ಷ ಪರ್ಯಂತ ಶಿಕ್ಷಕನಾಗಿದ್ದು, ಅದರಲ್ಲಿ 22
ವರ್ಷ ಸಾರಳ್(ಅಲೀಬಾಗ್ ತಾಲೂಕು) ನ ಜನತಾ ಶಿಕ್ಷಣ ಮಂಡಲದ ಮಾಧ್ಯಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು.
ಭಾರತ-ಪಾಕ್ ಮತ್ತು ಭಾರತ-ಚೀನಾ ಯುದ್ದದ ಸಮಯದಲ್ಲಿ ವಿದ್ಯಾರ್ಥಿಗಳು
ಮತ್ತು ಸಹಶಿಕ್ಷಕರ ಸಹಾಯದಿಂದ ನಿಧಿ ಸಂಗ್ರಹಿಸಿ ಸರಕಾರಕ್ಕೆ ಕಳುಹಿಸಿಕೊಟ್ಟರು. ವಿದ್ಯಾರ್ಥಿಗಳ
ಬಿಡುವಿನ ವೇಳೆಯಲ್ಲಿ 1968-69 ರಲ್ಲಿ ಊರಿನ ರಸ್ತೆಯನ್ನು ಶ್ರಮದಾನದ ಮೂಲಕ ನಿರ್ಮಾಣ
ಮಾಡುವುದರಲ್ಲಿ ಅವರ ಪಾತ್ರ ಅಗಾಧವಾಗಿತ್ತು. ಗೋಪೇಶ್ವರ
ಶಿಕ್ಷಣ ಮಂಡಳಿಯ ಕಾರ್ಯದರ್ಶಿಯಾಗಿ ದುಡಿದು ನಿಧಿ ಸಂಗ್ರಹಿಸಿ ಶಾಲೆಯ ಕಟ್ಟಡವನ್ನು ನಿರ್ಮಾಣ
ಮಾಡಲಾಯಿತು . ಬಡ ಮಕ್ಕಳಿಗೆ ಬಿಡುವಿನ ವೇಳೆ ಉಚಿತವಾಗಿ
ಹೆಚ್ಚಿನ ಶಿಕ್ಷಣ ನೀಡುತ್ತಿದ್ದರು. 1989ರಲ್ಲಿ ರಾಜ್ಯ ಸರಕಾರದ “ಆದರ್ಶ ಶಿಕ್ಷಕ” ಪ್ರಶಸ್ತಿ
ಲಭಿಸಿತು. ಕೃಷಿಯಲ್ಲೂ ಆಸಕ್ತಿ ಹೊಂದಿದ ಅವರು
ಸಣ್ಣ ಜಾಗದಲ್ಲೂ ಬಹಳಷ್ಟು ತರಹದ ಕೃಷಿ ವ್ಯವಸಾಯ ಮಾಡಿದ್ದರು. ರಾಯಗಡ ಜಿಲ್ಲಾ ಸಾರಸ್ವತ ಬ್ರಾಹ್ಮಣ ಮಂಡಲದ ಉಪಾಧ್ಯಕ್ಷರಾಗಿಯೂ
ಸೇವೆ ಸಲ್ಲಿಸಿರುತ್ತಾರೆ.
ಇತಿ,
BSBS
ಜನ್ಮ ತಾರೀಕು: 07-05-1932
ಜನ್ಮ ಸ್ಥಳ: ಪರಳ್ ,ಮುಂಬೈ
ಜಾತಿ ಘಟಕ :
ಭಾಲಾವಲೀಕರ್
ಕುಲದೇವರು: ಮಂಗೇಶ ಮಹಾಲಕ್ಷ್ಮಿ
ಗೋತ್ರ: ಧನಂಜಯ
ನಿವಾಸ: ಮುದ್ದಾಂ ವೈಜನಾಥ
ಪೋ: ಹುಮ್ ಗಾವ್ ತಾ:ಕರ್ಜತ್
ಜಿಲ್ಲಾ; ರಾಯ್ ಗಡ್
ಶ್ರೀ
ದತ್ತ ಗಣಪತಿ ಇವರು ಲಾಂಜಾ ತಾಲೂಕಿನ ಹರ್ಚೆ (ಸಚಿನ್ ತೆಂಡುಲ್ಕರ್ ರ ಮೂಲ ಊರು,
ಕುಟುಂಬದವರು) ಯ ಮೂಲ ನಿವಾಸಿ. ಅನಕ್ಷರಸ್ಥೆ
ತಾಯಿ ಆಚೀಚಿಗಿನ ಮನೆಗಳಲ್ಲಿ ಪಾತ್ರೆ-ಪಗಡೆ ತೊಳೆದು ಇಬ್ಬರು ಹುಡುಗರನ್ನು ಬೆಳೆಸಿದರು. ಅಲೀಬಾಗ್ ತಾಲೂಕಿನ ಸಾಗರಗಡವೆಂಬ ಕೋಟೆಯ ಸನಿಹದಲ್ಲಿಯೇ ಇದ್ದ
ಮನೆಯಲ್ಲಿ ಅವರು ಹೇಗೋ ಏನೋಮಾಡಿ ಹದಿನೈದು ವರ್ಷ ಕಳೆದರು.
ಬಾಲಕನಿದ್ದಾಗ ಬೆಳಗ್ಗೆ-ಸಾಯಂಕಾಲ ಮೂರು ಮೈಲು ನಡೆದುಕೊಂಡು ಹೋಗಿ ಪ್ರಾಥಮಿಕ ಶಿಕ್ಷಣವನ್ನು
ಪೂರ್ತಿಗೊಳಿಸಿದರು.
1949 ಜೂನ್ ತಿಂಗಳಲ್ಲಿ ಪ್ರಾಥಮಿಕ ಶಾಲಾ ಅಧ್ಯಾಪಕನಾಗಿ
ವೃತ್ತಿ ಜೀವನ ಪ್ರಾರಂಭಿಸಿದರು. ಆ ಸಮಯದಲ್ಲಿ ಕರ್ಜತ್ ತಾಲೂಕಿನಲ್ಲಿ ಆದಿವಾಸಿ ಜನಾಂಗ
ಕಾಡು-ಮೇಡುಗಳಲ್ಲಿ ವಾಸಿಸುತ್ತಿತ್ತು.
ತೆಂಡುಲ್ಕರ್ ಇದನ್ನೇ ತನ್ನ ಕರ್ಮ ಭೂಮಿಯನ್ನಾಗಿಸಿಕೊಂಡರು. ದಹಿವಲೀ, ಮಾಲೆಗಾಂವ್, ವಂಜಾರ್ ಪಾಡ, ಗೌಳವಾಡ,
ಜಾಮರುಂಗ್, ವೈಜನಾಥ ಇತ್ಯಾದಿ ಶಾಲೆಗಳ ಸರ್ವಾಂಗ ಪರಿಪೂರ್ಣತೆಗಾಗಿ ಮನಸ್ಸು ಮಾಡಿದರು. ಶಾಲಾ
ಸಮಯಕ್ಕೆ ಚ್ಯುತಿ ಬರದಂತೆ ಪ್ರತಿದಿನ ಎರಡೂವರೆ ಘಂಟೆ ಬಡಮಕ್ಕಳಿಗೆ ಉಚಿತವಾಗಿ ಕಲಿಸಲು ಪ್ರಾರಂಭಿಸಿದರು. ಶಾಸಕೀಯ ವಿದ್ಯಾನಿಕೇತನದ ಪರೀಕ್ಷೆಗೆ 16 ಮಕ್ಕಳನ್ನು
ಕುಳ್ಳಿರಿಸಿ, 8 ಮಕ್ಕಳು ನಾಶಿಕ ಮತ್ತು ಧುಳೆ ಯ ಶಾಲೆಗಳಲ್ಲಿ ಕಲಿತು ಬೇರೆ ಬೇರೆ ಉದ್ಯೋಗಗಳಲ್ಲಿ
ಸೇರಿದರು. ಅದರಲ್ಲೂ 3 ಮಕ್ಕಳು ಆದಿವಾಸಿಗಳ ಪೈಕಿ
ಇದ್ದರು. ಜಿಲ್ಲಾ ಅತ್ಯುತ್ತಮ ಶಾಲಾ ಪ್ರಶಸ್ತಿ ಯೋಜನೆಯ
ಮೊದಲ ವರ್ಷದಲ್ಲೇ ದಹಿವಲಿ-ಮಾಲೆಗಾಂವ್ ಶಾಲೆಗೆ ಬೆಳ್ಳಿ ಪದಕದ ಗೌರವ ದೊರೆಯಿತು. 1935 ರಲ್ಲಿ ಜಿಲ್ಲಾ ಪರಿಷತ್
ವತಿಯಿಂದ ಪ್ರಶಸ್ತಿ ಪತ್ರ ಮತ್ತು ಮಾನ ಚಿಹ್ನೆಯೊಂದಿಗೆ ಗೌರವಿಸಲಾಯಿತು. ದಹಿವಲಿ-ಮಾಲೆಗಾಂವ್ ನ ನಾಗರಿಕರು ಚಿನ್ನದ ಉಂಗುರ ನೀಡಿ
ಗೌರವಿಸಿದರು. ಶ್ರೀ ದತ್ತೋವಾಮನ ಪೋತ್ ದಾರ್ ರವರ
ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ರೂ.2000/- ನೀಡಿ ಗೌರವಿಸಲಾಯಿತು. ಈ ಸದ್ಗುಣದ ಶಿಕ್ಷಕರಿಗೆ 1973 ರಲ್ಲಿ ಸರ್ವೋಚ್ಛ
ರಾಷ್ಟ್ರಪತಿ ಪಾರಿತೋಷಕ ನೀಡಿ ಗೌರವಿಸಲಾಯಿತು.
ಇತಿ,
BSBS
ದಕ್ಷಿಣ ಕನ್ನಡ ಅಧೀನ ನ್ಯಾಯಾಲಯದ ದಾಖಲೆಯಲ್ಲಿ ಭಾಲಾವಲೀಕಾರ್ ಎಂಬ ಪದದ ಬಳಕೆ (1893) ಸಾಮಾನ್ಯವಾಗಿತ್ತು ಎಂಬುದು ಸ್ಪಷ್ಟವಾಗಿದೆ.
ಇತಿ,
BSBS