ಜನನ ತಾರೀಕು: 11-01-1940
ಕುಲದೇವರು: ಶ್ರೀ ಲಕ್ಷ್ಮೀ
ನರಸಿಂಹ ಗೋತ್ರ; ಕಾಶ್ಯಪ
ಜನ್ಮ ಸ್ಥಳ: ರಾಜವಾಡಿ (ರತ್ನಗಿರಿ)
ನಿವಾಸ: ಮುದ್ದಾಂ, ಪೋಸ್ಟ್
: ಸಾರಳ್, ತಾ: ಅಲೀಬಾಗ್, ಜಿಲ್ಲಾ:ರಾಯಗಡ
ಪ್ರಾಪ್ತ ಪರಿಸ್ಥಿತಿಯಲ್ಲಿ ವಿದ್ಯಾದಾನ, ವಿದ್ಯಾರ್ಜನೆ,ಧನಾರ್ಜನೆ ಇದೆಲ್ಲ
ಒಮ್ಮೆಲೆ ಕಸರತ್ತು ಮಾಡುವ ವ್ಯಕ್ತಿ ದುರ್ಲಭವೆಂದೇ ಹೇಳಬೇಕು. ಗುರುನಾಥ ಶಂಕರ ಸಾಖಲ್ಕರ್ ಅದಕ್ಕೆ ಉದಾಹರಣೆ ಎಂದು ಹೇಳಬಹುದು. ಅಲೀಬಾಗ್ ತಾಲೂಕಿನ ಹಾಶಿವರೆ ಎಂಬಲ್ಲಿ ಮಹಾತ್ಮ ಗಾಂಧಿ ಕಾಲೇಜ್
ನಲ್ಲಿ ಉತ್ಕೃಷ್ಟ ಅಂಕಶ್ರೇಣಿಯೊಂದಿಗೆ M.Sc. ಉತ್ತೀರ್ಣರಾದರು. ಅದೇ ವರ್ಷ ಅದೇ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆಗೆ ಸೇರಿದರು.
ಒಂದೆಡೆ ಅಧ್ಯಾಪನ ಮಾಡುತ್ತಾ ಇನ್ನೊಂದೆಡೆ ಶಿಕ್ಷಣವನ್ನು ಮುಂದುವರಿಸಿದರು. S.T.C,
B.A, B.Ed ಮತ್ತು ಹಿಂದಿ ಪಂಡಿತ್ ಪರೀಕ್ಷೆಗಳನ್ನು ಕಟ್ಟಿ ಪಾಸ್ ಮಾಡಿಕೊಂಡರು. 29 ವರ್ಷ ಪರ್ಯಂತ ಶಿಕ್ಷಕನಾಗಿದ್ದು, ಅದರಲ್ಲಿ 22
ವರ್ಷ ಸಾರಳ್(ಅಲೀಬಾಗ್ ತಾಲೂಕು) ನ ಜನತಾ ಶಿಕ್ಷಣ ಮಂಡಲದ ಮಾಧ್ಯಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು.
ಭಾರತ-ಪಾಕ್ ಮತ್ತು ಭಾರತ-ಚೀನಾ ಯುದ್ದದ ಸಮಯದಲ್ಲಿ ವಿದ್ಯಾರ್ಥಿಗಳು
ಮತ್ತು ಸಹಶಿಕ್ಷಕರ ಸಹಾಯದಿಂದ ನಿಧಿ ಸಂಗ್ರಹಿಸಿ ಸರಕಾರಕ್ಕೆ ಕಳುಹಿಸಿಕೊಟ್ಟರು. ವಿದ್ಯಾರ್ಥಿಗಳ
ಬಿಡುವಿನ ವೇಳೆಯಲ್ಲಿ 1968-69 ರಲ್ಲಿ ಊರಿನ ರಸ್ತೆಯನ್ನು ಶ್ರಮದಾನದ ಮೂಲಕ ನಿರ್ಮಾಣ
ಮಾಡುವುದರಲ್ಲಿ ಅವರ ಪಾತ್ರ ಅಗಾಧವಾಗಿತ್ತು. ಗೋಪೇಶ್ವರ
ಶಿಕ್ಷಣ ಮಂಡಳಿಯ ಕಾರ್ಯದರ್ಶಿಯಾಗಿ ದುಡಿದು ನಿಧಿ ಸಂಗ್ರಹಿಸಿ ಶಾಲೆಯ ಕಟ್ಟಡವನ್ನು ನಿರ್ಮಾಣ
ಮಾಡಲಾಯಿತು . ಬಡ ಮಕ್ಕಳಿಗೆ ಬಿಡುವಿನ ವೇಳೆ ಉಚಿತವಾಗಿ
ಹೆಚ್ಚಿನ ಶಿಕ್ಷಣ ನೀಡುತ್ತಿದ್ದರು. 1989ರಲ್ಲಿ ರಾಜ್ಯ ಸರಕಾರದ “ಆದರ್ಶ ಶಿಕ್ಷಕ” ಪ್ರಶಸ್ತಿ
ಲಭಿಸಿತು. ಕೃಷಿಯಲ್ಲೂ ಆಸಕ್ತಿ ಹೊಂದಿದ ಅವರು
ಸಣ್ಣ ಜಾಗದಲ್ಲೂ ಬಹಳಷ್ಟು ತರಹದ ಕೃಷಿ ವ್ಯವಸಾಯ ಮಾಡಿದ್ದರು. ರಾಯಗಡ ಜಿಲ್ಲಾ ಸಾರಸ್ವತ ಬ್ರಾಹ್ಮಣ ಮಂಡಲದ ಉಪಾಧ್ಯಕ್ಷರಾಗಿಯೂ
ಸೇವೆ ಸಲ್ಲಿಸಿರುತ್ತಾರೆ.
ಇತಿ,
BSBS