Saturday, August 28, 2021

ಸ್ವಾತಂತ್ರ್ಯಪೂರ್ವದ ಭಾಲಾವಲೀಕರ್ ಸಮಾಜದ ದಾಖಲೆಗಳು – 1 (1875)

     ಈ ಕೆಳಕಂಡ ದಾಖಲೆಯು 1875 ರದ್ದಾಗಿದ್ದು ಸುಮಾರು 145 ವರ್ಷಗಳಷ್ಟು  ಹಳೆಯದಾಗಿದೆ. ಬ್ರಿಟಿಷ್ ಆಡಳಿತ ಕಾಲದ  ಕಾಸರಗೋಡು ತಾಲೂಕಿನ  ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ  ದಾಖಲಾಗಿದೆ. ಆ ಸಮಯದಲ್ಲಿ ಕಾಸರಗೋಡು ದಕ್ಷಿಣ ಕನ್ನಡ ( SOUTH KANARA) ಜಿಲ್ಲೆಗೆ ಹಾಗೂ ಮಡ್ರಾಸ್ (MADRAS) ಪ್ರಾಂತ್ಯಕ್ಕೆ ಒಳಪಟ್ಟಿತ್ತು. 







ಇತಿ,

BSBS

Saturday, August 7, 2021

ರಮೇಶ ದಿಗಂಬರ ಕಾಮತ್



ಜನ್ಮ ದಿನಾಂಕ : 11-08-1923

ಜನ್ಮ ಸ್ಥಳ: ನಿವಳೀ ತಾ-  ಚಿಪಳೂಣ್

ಜಾತಿ ಘಟಕ : ಭಾಲಾವಲೀಕರ್ , ಕುಲದೇವರು: ಸಪ್ತ ಕೋಟೇಶ್ವರ

ಗೋತ್ರ :ಗೌತಮ

ನಂದಾದೀಪ, ರಾಜೇಂದ್ರ ನಗರ, ಪುಣೆ.

      ಕೆಲವರಂತೂ ಸಮಾಜ ಸೇವೆ ಮಾಡುತ್ತಾ, ಪ್ರಚಾರದಿಂದ ದೂರ ಇದ್ದು ಕೆಲಸದಲ್ಲೇ ಕಾರ್ಯ ತತ್ಪರರಾಗಿರುತ್ತಾರೆ.

ಅಂತಹ ಅತ್ಯಂತ ದುರ್ಲಭ ಸಮಾಜ ಸೇವಕನ ಪರಿಚಯ ಇಲ್ಲಿದೆ.  ರಮೇಶ ಕಾಮತ್ 1943 ಪುಣೆಗೆ ಬಂದು ನೆಲೆಸಿದರು.  ಆಗ ಅವರು P&T(ಅಂಚೆ ಮತ್ತು ತಂತಿ) ಇಲಾಖೆಯಲ್ಲಿದ್ದರು.  1981ರಲ್ಲಿ ಸೇವಾ ನಿವೃತ್ತಿ ಪಡೆದರು.  ಸೇವೆಯಲ್ಲಿದ್ದಾಗಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ (R. S. S) ದ ಕಾರ್ಯಕರ್ತರಾಗಿದ್ದರು.  ಪುಣೆ ದತ್ತವಾಡಿ ಶಾಖೆಯ ಜನಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಅನೇಕ ವರ್ಷಗಳ ವರೆಗೆ ದುಡಿದಿದ್ದಾರೆ.  ದತ್ತವಾಡಿ ವಿಕಾಸ ಮಂಡಲ, ಸಹ್ಯಾದ್ರಿ ಹೈಸ್ಕೂಲ್, ಸ್ವಾಮೀ ವಿವೇಕಾನಂದ ಮಂಡಲ, ತ್ರಿವೇಣಿ ಸಹಕಾರಿ ಗ್ರಾಹಕ ಸಂಘ ಹೀಗೆ ಪುಣೆಯ 10-12 ಸಂಸ್ಥೆಗಳ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಪುಣ್ಯವಂತ ಇವರು.

     1981ನೇ ವರ್ಷದಲ್ಲಿ ಸ್ಥಾಪನೆಯಾದ ಸಾರಸ್ವತ ಮಿತ್ರಮಂಡಲದ ಒಬ್ಬ ಅಧಾರಸ್ತಂಭವಾಗಿದ್ದರು.  ವಧೂ-ವರ ಅನ್ವೇಷಣೆಯ ವೈವಾಹಿಕ ವಿಭಾಗವನ್ನು ಪ್ರಾರಂಭಿಸಿ ಅತ್ಯಂತ ಶ್ರಧ್ಧೆ ಮತ್ತು ಪ್ರಯತ್ನದಿಂದ ಅನೇಕರ ವಿವಾಹಕ್ಕೂ ಕಾರಣರಾದ ಮಹಾನುಭಾವ.  700-800 ವಿವಾಹೇಚ್ಛ ಯುವಕ-ಯುವತಿಯರ ಮಾಹಿತಿಯನ್ನು ಸಂಗ್ರಹಿಸಿದ್ದರು.  26-01-1990 ರಂದು ಸಾರಸ್ವತ ಮಿತ್ರ ಮಂಡಲದ ವತಿಯಿಂದ ಅತಿ ದೊಡ್ಡ ಶಿಸ್ತು ಬಧ್ಧ ವಧೂವರ “ಮೇಳಾವಾ” ವನ್ನು ಸಂಘಟಿಸಿದ್ದರು.  “ಸಾರಸ್ವತ ಚೈತನ್ಯ” ಮತ್ತು ಇತರ ನಿಯತಕಾಲಿಕಗಳಲ್ಲಿ ವೈವಾಹಿಕ ವಿಚಾರದ ಬಗ್ಗೆ ವಿಚಾರ ಪ್ರವರ್ತಕ ಲೇಖನಗಳನ್ನು ಬರೆದು ಜನಜಾಗೃತಿ ಮೂಡಿಸಿದ್ದರು.

ಇತಿ,

BSBS

Sunday, August 1, 2021

ಭಾಲಾವಲಿ ಸಾರಸ್ವತ ಬ್ರಾಹ್ಮಣರ ಪ್ರಥಮ ಸಮ್ಮೇಳನ ( 1929 )

 

     ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ  ಭಾಲಾವಲೀಕರ್ ಸಾರಸ್ವತ ಬ್ರಾಹ್ಮಣರ ಪ್ರಥಮ ಸಮ್ಮೇಳನದ  ಆಮಂತ್ರಣ  ಇಲ್ಲಿದೆ (1929)  ಹಿರಿಯರಿಂದ ತಿಳಿದ ಮಾಹಿತಿಯಂತೆ ಈ ಸಮ್ಮೇಳನಕ್ಕೆ ಸಂಬಂಧಪಟ್ಟ ಹಾಸುಕಲ್ಲು ಇದ್ದು , ಅದನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ. 

ಆಮಂತ್ರಣ  


ಹಾಸುಕಲ್ಲು


ದೇವಸ್ಥಾನದ ಎಡಭಾಗ 


ಇತಿ,

BSBS