ಜನ್ಮ ದಿನಾಂಕ : 11-08-1923
ಜನ್ಮ ಸ್ಥಳ: ನಿವಳೀ ತಾ-
ಚಿಪಳೂಣ್
ಜಾತಿ ಘಟಕ :
ಭಾಲಾವಲೀಕರ್ , ಕುಲದೇವರು: ಸಪ್ತ ಕೋಟೇಶ್ವರ
ಗೋತ್ರ :ಗೌತಮ
ನಂದಾದೀಪ, ರಾಜೇಂದ್ರ
ನಗರ, ಪುಣೆ.
ಕೆಲವರಂತೂ ಸಮಾಜ ಸೇವೆ ಮಾಡುತ್ತಾ, ಪ್ರಚಾರದಿಂದ ದೂರ
ಇದ್ದು ಕೆಲಸದಲ್ಲೇ ಕಾರ್ಯ ತತ್ಪರರಾಗಿರುತ್ತಾರೆ.
ಅಂತಹ ಅತ್ಯಂತ ದುರ್ಲಭ ಸಮಾಜ
ಸೇವಕನ ಪರಿಚಯ ಇಲ್ಲಿದೆ. ರಮೇಶ ಕಾಮತ್ 1943
ಪುಣೆಗೆ ಬಂದು ನೆಲೆಸಿದರು. ಆಗ ಅವರು P&T(ಅಂಚೆ
ಮತ್ತು ತಂತಿ) ಇಲಾಖೆಯಲ್ಲಿದ್ದರು. 1981ರಲ್ಲಿ
ಸೇವಾ ನಿವೃತ್ತಿ ಪಡೆದರು. ಸೇವೆಯಲ್ಲಿದ್ದಾಗಲೇ ರಾಷ್ಟ್ರೀಯ
ಸ್ವಯಂ ಸೇವಕ ಸಂಘ (R. S. S) ದ ಕಾರ್ಯಕರ್ತರಾಗಿದ್ದರು.
ಪುಣೆ ದತ್ತವಾಡಿ ಶಾಖೆಯ ಜನಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಅನೇಕ ವರ್ಷಗಳ ವರೆಗೆ
ದುಡಿದಿದ್ದಾರೆ. ದತ್ತವಾಡಿ ವಿಕಾಸ ಮಂಡಲ, ಸಹ್ಯಾದ್ರಿ
ಹೈಸ್ಕೂಲ್, ಸ್ವಾಮೀ ವಿವೇಕಾನಂದ ಮಂಡಲ, ತ್ರಿವೇಣಿ ಸಹಕಾರಿ ಗ್ರಾಹಕ ಸಂಘ ಹೀಗೆ ಪುಣೆಯ 10-12 ಸಂಸ್ಥೆಗಳ
ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಪುಣ್ಯವಂತ ಇವರು.
1981ನೇ ವರ್ಷದಲ್ಲಿ ಸ್ಥಾಪನೆಯಾದ ಸಾರಸ್ವತ ಮಿತ್ರಮಂಡಲದ
ಒಬ್ಬ ಅಧಾರಸ್ತಂಭವಾಗಿದ್ದರು. ವಧೂ-ವರ ಅನ್ವೇಷಣೆಯ
ವೈವಾಹಿಕ ವಿಭಾಗವನ್ನು ಪ್ರಾರಂಭಿಸಿ ಅತ್ಯಂತ ಶ್ರಧ್ಧೆ ಮತ್ತು ಪ್ರಯತ್ನದಿಂದ ಅನೇಕರ ವಿವಾಹಕ್ಕೂ ಕಾರಣರಾದ
ಮಹಾನುಭಾವ. 700-800 ವಿವಾಹೇಚ್ಛ ಯುವಕ-ಯುವತಿಯರ
ಮಾಹಿತಿಯನ್ನು ಸಂಗ್ರಹಿಸಿದ್ದರು. 26-01-1990
ರಂದು ಸಾರಸ್ವತ ಮಿತ್ರ ಮಂಡಲದ ವತಿಯಿಂದ ಅತಿ ದೊಡ್ಡ ಶಿಸ್ತು ಬಧ್ಧ ವಧೂವರ “ಮೇಳಾವಾ” ವನ್ನು ಸಂಘಟಿಸಿದ್ದರು. “ಸಾರಸ್ವತ ಚೈತನ್ಯ” ಮತ್ತು ಇತರ ನಿಯತಕಾಲಿಕಗಳಲ್ಲಿ
ವೈವಾಹಿಕ ವಿಚಾರದ ಬಗ್ಗೆ ವಿಚಾರ ಪ್ರವರ್ತಕ ಲೇಖನಗಳನ್ನು ಬರೆದು ಜನಜಾಗೃತಿ ಮೂಡಿಸಿದ್ದರು.
ಇತಿ,
BSBS